ಭಾನುವಾರ, ಮೇ 31, 2009

ಪರಶುರಾಮ ಜಯಂತಿ

ಪರಶುರಾಮ ಜಯಂತಿ

ವೈಶಾಖ ಶುಕ್ಲ ತೃತಿಯಾ
ಕೃತ್ತಿಕಾ ನಕ್ಷತ್ರ, ಸೌಭಾಗ್ಯ ಯೋಗ, ತೈತಿಲಕರಣ

ಪರಶುನಾಮಕನಾಗಿ ಪರಮಾತ್ಮನೆ ಅವತರಿಸಿದ ದಿನ. ಜಗತ್ತಿನಲ್ಲಿ ಯಾವ ಕರ್ತವ್ಯಚ್ಯತರಾದ ದುಷ್ಟ ಕ್ಷತ್ರಿಯರಿದ್ದರೋ, ಯಾರಿಂದ ಪ್ರಜೆಗಳಿಗೆ ತೊಂದರೋಯಾಗುತ್ತಿತ್ತೋ ಆಂತಹ ಪಾಪಿಷ್ಟ ರಾಜರನ್ನು ಸಂಹರಿಸಿ ಉಳಿದ ರಾಜರಿಗೆ ನೀತಿ ಭೋದನೆಯನ್ನು ಮಾಡುವುದಕ್ಕಾಗಿ ದೇವರು ಅವತರಿಸಿದ ದಿನ. "ಪರಶು" ಎಂದರೆ ಇದು ಸಂಸ್ಕೃದ ಶಬ್ದ. ಅದರ ಕನ್ನಡ ಅರ್ಥ "ಕೊಡ್ಡಲಿ"ಎಂದು ಅದನ್ನು ಹಿಡಿದುದದ್ದಕ್ಕೆ ಅವನನ್ನು ಪರಶು-ರಾಮ ಎಂದು ಕರೆಯಲ್ಪಟ್ಟಿತು. ಇವನು ಜಮದಗ್ನಿ ಋಷಿಗಳ ಹಾಗೂ ರೇಣುಕಾ ದೇವಿಯಲ್ಲಿ ಅವತರಿಸಿದ. ಇವನು ೨೧ ಸಲ ಭೂ ಪ್ರದಕ್ಷಿಣೆಯನ್ನು ಮಾಡಿದಾಗ ಸಂಹಾರ ಪೂರ್ಣಗೊಂಡಿತು. ಇವತ್ತಿನ ದಿನ ಅವನನ್ನು ದುಷ್ಚ ಭಂಜಕನೆಂದು ತಿಳಿದು ಚಿಂತಿಸಬೇಕು.

ಜಮದಗ್ನಿ ಸಂತೋವೀರ ಕ್ಷತ್ರಿಯಾಂತಕರ ಪ್ರಭೋ |
ಗ್ರಹಣಾರ್ಘ್ಯಂ ಮಯಾ ದತ್ತಂ ಕೃಪಯಾ ಪರಮೇಶ್ವರ ||

ಅರ್ಥ :- ಜಮದಗ್ನಿಯ ಮಗನೆ, ವೀರನೆ, ದುಷ್ಟ ಕ್ಷತ್ರಿಯರಿಗೆ ಯಮನಂತಿರುವವನೆ, ನಾನು ಕೊಂಡುವ ಅರ್ಘ್ಯವನ್ನು ಸ್ವೀಕರಿಸಿ ನನಗೆ ದುಷ್ಟರ ಭಾಧ ಇಲ್ಲದಂತೆ ಮಾಡು. ನನ್ನನ್ನು ಯಾವಾಗಲು ಅಂತಹ ದುಷ್ಟರಿಂದ ದೂರ ಇಡು. ದುಷ್ಟ ವಿಚಾರಗಳು, ದುಷ್ಟ ಆಚಾರಗಳು ನನ್ನಿಂದ ಆಗದೆ ಇದ್ದಂತೆ ನನ್ನನ್ನು ಕಾಪಾಡು ಎಂದು ಆತನನ್ನು ಪ್ರಾರ್ಥಿಸುವುದೇ ಈ ದಿನದ ವಿಶೇಷ. ಎಲ್ಲರು ಈ ಪ್ರಾರ್ಥನೆಯನ್ನು ಅವಶ್ಯವಾಗಿ ಮಾಡಬೇಕು. ಇವತ್ತಿನ ಜಗತ್ತಿನಲ್ಲಿ ಯಾರಿಗೆ "ದುಷ್ಟ" ಶಬ್ದದ ಪರಿಚಯವಿಲ್ಲ ಹೇಳಿ? ಇವತ್ತು ಶಬ್ದದ ಪರಿಚಯ ನಾಳೆ ದುಷ್ಟತನದ ಅನುಭವ. ಅದನ್ನು ದೂರದಲ್ಲಿ ಎಸೆಯುವುದಕ್ಕಾಗಿ ಈ ಪ್ರಾರ್ಥನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ