ಭಾನುವಾರ, ಮೇ 31, 2009

ಜೈಷ್ಠ ಮಾಸ

ಜೈಷ್ಠ ಮಾಸ

ಜೈಷ್ಠ ಮಾಸದ ಹೆಸರಿನಿಂದಲೇ ಅದರ ಶ್ರೇಷ್ಠತೆಯನ್ನು ತಿಳಿದು ಬರುತ್ತದೆ. ಈ ಮಾಸದಲ್ಲಿ ಮೊಸರು ಅನ್ನ ದಾನಕ್ಕೆ ಬಹಳ ಮಹತ್ವವನ್ನು ಹೇಳಿದ್ದಾರೆ. ಈ ಮಾಸದ ಮಹತ್ವ ಭಗೀರಥನ ಕಥೆಯಲ್ಲಿ ಬರುತ್ತದೆ. ಶಿವನು ಭಗೀರಥನಿಗೆ ಈ ರೀತಿಯಾಗಿ ಆಜ್ಞೆ ಮಾಡಿದನು --

"ಜೈಷ್ಠಮಾಸದಲ್ಲಿ ನಿತ್ಯ ಪ್ರಾತಃ ಕಾಲದಲ್ಲಿ ಎದ್ದು ಪ್ರಾಕರ್ವಿಧಿಗಳನ್ನು ಮುಗಿಸಿದ ನಂತರ ವಿಧಿಪೂರ್ವಕವಾಗಿ ಸ್ನಾನ ಮಾಡಬೇಕು. ಆಮೇಲೆ ತ್ರಿವಿಕ್ರಮ ರೂಪಿಯಾದ ಪರಮಾತ್ಮನ ಪೂಜೆಯನ್ನು ಮಾಡಬೇಕು. ಅನಂತರ ಹೇರಾಜಾ ಯೋಗ್ಯರಾದ ಬ್ರಾಹ್ಮಣರಿಗೆ ಮೊಸರು ಅನ್ನವನ್ನು ಹಾಗು ನೀರನ್ನು ದಾನವಾಗಿ ಕೊಡಬೇಕು. ಈ ಪ್ರಕಾರ ಒಂದು ತಿಂಗಳು ಪರ್ಯಂತ ನೀನು ಭಕ್ತಿಯಿಂದ ಆಚರಿಸಿದರೆ ಶ್ರೀ ಹರಿಯು ಪ್ರಸನ್ನನಾಗಿ, ಸರ್ವ ಪಾಪಗಳನ್ನು ಕಳೆಯಲು ಸಮರ್ಥಳಾದ ಗಂಗೆಯನ್ನು ಭೂಮಿಗೆ ಕರೆದು ತರುವನು." ಈ ಪ್ರಕಾರ ಶಿವನು ತಿಳಿಸಿದಂತೆ ಭಗೀರಥ ರಾಜನು ವ್ರತವನ್ನು ಆಚರಿಸಿದನು. ಆ ವ್ರತಾಚಾರಣೆ ಮಾತ್ರದಿಂದ ವಿಷ್ಣುವು ಪ್ರಸನ್ನನಾಗಿ ರಾಜನಿಗೆ ಪ್ರತ್ಯಕ್ಷನಾದನು, ಗಂಗಾವತಾರಣ ಮಾಡುವುದಾಗಿ ಅವನಿಗೆ ವರವನ್ನು ಕೊಟ್ಟನು. ಈ ರೀತಿಯಾಗಿ ಭವಿಷ್ಯ ಪುರಾಣದಲ್ಲಿ ಬಂದ ಜೈಷ್ಠ ಮಾಸದ ಮಹತ್ಮೆಯಲ್ಲಿ ವರ್ಣನೆ ಮಾಡಿದ್ದಾರೆ. ಈ ಮಾಸವು ಗಂಗಾವತಾರಕ್ಕೆ ಕಾರಣಿಭೂತವಾದ ಮಾಸ ಎಂಬುದಾಗಿ ನಾವು ತಿಳಿಯಬೇಕು. ಈ ಒಂದು ಮಹಾಕಾರ್ಯದಿಂದ ಎಷ್ಟೋ ಸಾತ್ವಿಕರ ಉದ್ಧಾರವಾಗಿದೆ, ಆಗುತ್ತಲೇ ಇದೆ.

ವಿಷ್ಣುರ್ವೈ ಸರ್ವದೇವಾನಾಂ ಜೈಷ್ಠಃ ಶ್ರೇಷ್ಠಃ ಪ್ರಜಾಪತಿಃ |
ತಥಾಯಂ ಸರ್ವಮಾಸಾನಾಂ ಜೈಷ್ಠ ಶ್ರೇಷ್ಠ ತಮಸ್ಮೃತಃ ||

ಎಲ್ಲ ದೇವತೆಗಳಲ್ಲಿ ವಿಷ್ಣುವು ಉತ್ತಮನಾಗಿರುವಂತೆ ಈ ಜೈಷ್ಠ ಮಾಸವು ಉಳಿದೆಲ್ಲ ಮಾಸಗಳಿಗಿಂತ ಶ್ರೇಷ್ಠವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ