ಭಾನುವಾರ, ಮೇ 31, 2009

ನರಸಿಂಹ ಜಯಂತಿ

ನರಸಿಂಹ ಜಯಂತಿ

ವೈಶಾಖ ಶುದ್ಧ ತ್ರಯೋದಶಿ ಚಿತ್ತಾ ನಕ್ಷತ್ರ ವಜ ಸಿದ್ಧಿ ಯೋಗಗಳು ತೈತಲಿಕರಣದಂದು ನರಸಿಂಹ ಜಯಂತಿ. ನರಸಿಂದ ರೂಪಿಯಾಗಿ ಅವತಾರ ಮಾಡಿದ ದಿವಸ.

ದುಷ್ಟನಾದ ಹಿರಣ್ಯಕಶಪುವನ್ನು ಸಂಹಾರ ಮಾಡುವುದಕ್ಕೆ ಅವತಾರ ಮಾಡಿದ ದೇವರು ಎಲ್ಲೆ ಇದ್ದರೂ ಸಜ್ಜನರ ಸಂರಕ್ಷಣೆಯನ್ನು ಮಾಡುತ್ತಾರೆ. ಕಂಬದಿಂದ ಹೊರಗೆ ಬಂದು ದೈತ್ಯನನ್ನು ಸಂಹರಿಸಿ ಪ್ರಲ್ಹಾದನನ್ನು ಅನುಗ್ರಹಿಸಿದ ಈ ನರಸಿಂಹ ರೂಪವನ್ನು ನೆನೆಸುವಾಗ ಪ್ರಲ್ಹಾದನನ್ನು ಮರೆಯುವಂತಿಲ್ಲ. ನರಸಿಂಹ ದೇವರನ್ನು ನೆನೆಸುವುದರಿಂದ ಎಲ್ಲ ತರಹದ ಪಾಪಗಳು ಹೋಗಿತ್ತವೆ. ಯಾವ ಗ್ರಹಗಳ ಭಾದೆ ಆಗುವುದಿಲ್ಲ. ಒಳಗೆ ಮನೆ ಮಾಡಿಕೊಂಡಿದ್ದ ಶತ್ರುಗಳು ಭಸ್ಮರಾಗುತ್ತಾರೆ. ಹೊರಗೆ ಇರುವ ಶತ್ರುಗಳು ದೂರ ಪಲಾಯನಗೈಯುತ್ತಾರೆ. ಅನೇಕ ವಿಧವಾದ ರೋಗಗಳು ದೂರವಾಗುತ್ತವೆ. ನವಗ್ರಹಗಳಲ್ಲಿ ಒಂದಾದ ಶನಿಯಪ ತಾನೇ ಸ್ವತಃ ನರಸಿಂಹ ದೇವರ ಮೇಲೆ ಸ್ತೋತ್ರವನ್ನು ಮಾಡಿದ್ದಾನೆ. ಅದರಲ್ಲಿ ಅವನೇ ನರಸಿಂಹ ದೇವರನ್ನು ನೆನೆಸಿದವರನ್ನು ನಾನು ಕಾಡುವುದಿಲ್ಲಾ ಎಂದು ಹೇಳಿದ್ದಾನೆ. ಇಂದಿನ ದಿನ ನರಸಿಂಹ ದೇವರನ್ನು ನೆನೆಯದೆ ಯಾರೂ ಇರಬಾರದು. ಎಷ್ಟೇ ವತ್ತಡ ಇದ್ದರೂ ಕೂಡ ಅವನ್ನು ನೆನಿಸಲೇಬೇಕು. ಇಲ್ಲದಿದ್ದರೆ ನಿಮಗೆ ಶತ್ರುಭಯ, ಶನಿಯ ಗ್ರಹಚಾರ, ರೋಗ, ಆಕಸ್ಮಿತವಾಗಿ ಬರುವ ಆಪತ್ತು ತಪ್ಪಿದ್ದಲ್ಲಾ. ಅನೂಕೂಲವಾದರೆ ಹೋಮವನ್ನೂ ಮಾಡಬೇಕು. ಆಗದಿದ್ದರೆ, ಹೋಮ ಆಗುವ ಸ್ಥಳಕ್ಕೆ ಹೋಗಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ