ಭಾನುವಾರ, ಮೇ 31, 2009

ಶನೈಶ್ವರ ಜಯಂತಿ

ಶನೈಶ್ವರ ಜಯಂತಿ

ವೈಶಾಖ -- ಅಮವಾಸ್ಯ - ಕೃತ್ತಿಕಾ ನಕ್ಷತ್ರ - ಅತಿಗಂಡಯೋಗ

ಒಂಬತ್ತು ಗ್ರಹಗಳಲ್ಲಿ ಒಬ್ಬ ಶನಿ. ಇವನ ಪರಿಚಯ ಬಹಳ ಏನು ಬೇಕಾಗಿಲ್ಲಾ. ಪ್ರಾಯ ಮನುಷ್ಯ ತನ್ನ ಜೀವನದಲ್ಲಿ ಶನಿಯ ಅನುಗ್ರಹ ಹಾಗೂ ನಿಗ್ರಹಗಳಿಗೆ ಪಾತ್ರನಾಗಿರುವುದು ಸಹಜ. ಶನಿ ಏನನ್ನು ಮಾಡಬಲ್ಲ. ಬಹಳ ಶ್ರೀಮಂತನಾಗಿದ್ದರೆ ಅವರಿಂದ ದುಷ್ಟ ಕಾರ್ಯಗಳನ್ನು ಮಾಡಿಸಿ ಅವರಿಗೆ ಅಧೋಗತಿ ತರಬಹುದು, ಆರೋಗ್ಯದಲ್ಲಿ ವ್ಯತ್ಯಾಸ ಮಾಡಬಹುದು. ಆಕಸ್ಮಿಕವಾಗಿ ಮರಣವು ಬರಬದುದು. ಎಲ್ಲ ಗ್ರಹಗಳಿಗಿಂತ ನಮಗೆ ಫಲಾಫಲಗಳನ್ನು ನೆನಪಿಡುವಂತೆ ಮಾಡುವವನು ಶನೈಶ್ವರ. ಇವನು ರಾಶಿಗಳಲ್ಲಿ ಮಕರ, ಕುಂಭಗಳಿಗೆ ಅಧಿಪತಿಯಾಗಿದ್ದಾನೆ. ಇವನ ನಾಮಕರಣ ಮಾಡಿದ್ದು ಇವನ ಚಲನವನ್ನನುಸರಿಸಿ. ಶನೈ ಚರತಿ ಇತಿ ಶನೈಶ್ವರಃ -- ಸಂಸ್ಕೃತದಲ್ಲಿ ಶನೈ ಎಂದರೆ ನಿಧಾನ ಎಂದರ್ಥ. ಇವನು ಚಲಿಸುವ ವಿಧಾನವು ನಿಧಾನ. ಇವನು ಒಂದು ರಾಷಿಯಲ್ಲಿ ೨-೧/೨ (ಎರಡೂ ವರೆ) ವರ್ಷ ಇರುತ್ತಾನೆ. ಅಲ್ಲದೆ ಅವನಿದ್ದ ರಾಶಿಗಿಂತ ಹಿಂದಿನ ರಾಶಿ ಹಾಗು ಮುಂದಿನ ರಾಶಿಯನ್ನು ಇದ್ದ ರಾಶಿಯಿಂದಲೇ ಪ್ರೇಕ್ಷಿಸುತ್ತಾನೆ. ಆದ್ದರಿಂದ ಶನಿಯ ಫಲ ೭ (ಏಳು) ವರ್ಷ ಇರುತ್ತವೆ. ಇವನು ರವಿ-ಛಾಯಾದೇವಿಯ ಮಗನಾಗಿ, ದಕ್ಷ ಪ್ರಜಾಪತಿಯ ಮೊಮ್ಮಗನಾಗಿ ಹುಟ್ಟಿದ. ಇವನು ನರಸಿಂಹ ದೇವರ ಪರಮಭಕ್ತ ಹಾಗೂ ಅವರ ಸ್ತೋತ್ರವನ್ನೂ ಮಾಡಿದ್ದಾನೆ. ನರಸಿಂಹ ದೇವರ ಭಕ್ತರನ್ನು ಹಾಗು ಆಂಜನೇಯ ಸ್ವಾಮಿಯ ಭಕ್ತರನ್ನು ಇವನು ಯಾವ ಕಷ್ಟಕ್ಕೂ ಗುರಿಪಡಿಸುವುದಿಲ್ಲಾ ಎಂದು ಹೇಳಿದ್ದಾನೆ. ನರಸಿಂದ ಸ್ತೋತ್ರದಲ್ಲಿ ಈ ರೀತಿ ಹೇಳಿದ್ದಾನೆ --- "ಯಾರು ಸ್ನಾನ ಸಂಧ್ಯಾವಂದನೆ, ದಾನ, ತೀರ್ಥ ಕ್ಷೇತ್ರಗಳ ಸಂದರ್ಸನ, ಸಜ್ಜನರ ಸಂಗ, ನಿರಂತರ ನಿನ್ನ ನಾಮಸ್ಮರಣೆ ಮಾಡುವವರೋ, ನಾನು ಅವರನ್ನು ಕಾಡುವುದಿಲ್ಲಾ. ಯಾರು ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಾರೆಯೋ ಅವರನ್ನು ಸಂಪೂರ್ಣ ಕೆಳಗೆ ಹಾಕುತ್ತೇನೆಠ ಎಂದು ಹೇಳಿದ್ದಾನೆ. ಇದಕ್ಕೆ ಸ್ವಾಮಿ ನರಸಿಂಹ ದೇವರು ಅನುಮತಿ ಕೊಟ್ಚಿದ್ದಾರೆ. ಅದಕ್ಕಾಗಿ ಜಪ-ತಪ-ದಾನ-ಧರ್ಮಗಳನ್ನು ಮಾಡಬೇಕು. ಇದರಲ್ಲಿ ಆಲಸ್ಯವನ್ನು ತೋರಿಸಬಾರದು. ಅನುಕೂಲವಾದರೆ ನವಗ್ರಹ ಹೋಮ ಮಾಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ