ಭಾನುವಾರ, ಮೇ 31, 2009

ಗಂಗೋತ್ಪತ್ತಿ

ಗಂಗೋತ್ಪತ್ತಿ

ವೈಶಾಖ ಶುದ್ಧ ಸಪ್ತಮಿ, ಪುಶ್ಯನಕ್ಷತ್ರ, ಶೂಲಯೋಗ, ಗಜಕರಣದಂದು

ಜಹ್ನುರಾಜನು ರಭಸದಿಂದ ಬಂದು ಅವನ ಯಜ್ಞವಾಟವನ್ನೆಲ್ಲ ಆವರಿಸಿದಾಗ ಕ್ರೋಧದಿಂದ ಎಲ್ಲ ಜಲವನ್ನು ಪಾನಮಾಡಿದ ಮತ್ತೆ ಭಗೀರಥ ಪ್ರಾರ್ಥನೆ ಮಾಡಿದಾಗ ತನ್ನ ಬಲದಿಂದ ಹೊರಗೆ ಹಾಕಿದ ದಿನ ಇದು.

ನದಿಗಳಲ್ಲಿ ಶ್ರೇಷ್ಠವಾದ "ಗಂಗಾ" ಹುಟ್ಟಿದ ದಿವಸ. ಅವತ್ತು ಗಂಗೆಯ ಸ್ಮರಣೆಯನ್ನು ಮಾಡಬೇಕು. ಅವಳು ಭೂಮಿಗೆ ಬಂದು ಎಲ್ಲರ ಪಾಪಗಳನ್ನು ಕಳೆಯುವುದಕ್ಕಾಗಿ ಸಿದ್ಧಳಾಗಿದ್ದಾಳೆ. ನಾವು ಅವಳನ್ನು ೧೦೦ ಯೋಜನೆಗಳ ದೂರದಲ್ಲಿದ್ದು ನಮ್ಮ ಮನೆಯಲ್ಲಿ ಮಾಡುವ ಸ್ನಾನ ಕಾಲದಲ್ಲಿ ನಾವು ನೆನಪಿಸಿದಾಗಲು ಅವಳು ಆ ಜಲದಲ್ಲಿ ಸನ್ನಿಹಿತಳಾಗುತ್ತಾಳೆ. ಆ ಜಲದಿಂದ ನಾವು ಸ್ನಾನ ಮಾಡಿದಾಗ ನಮ್ಮ ಪಾಪಗಳು ಕಳೆಯುತ್ತವೆ. ಇವೆಲ್ಲಾ ಕೇವಲ ಗಂಗೆಯ ನಾಮಸ್ಮರಣೆಯಿಂದಲೆ ನೆರವೇರುವ ಕಾಯಕ. ಇವಳು ದೇವತೆಗಳ ಲೋಕದಲ್ಲಿಯು ಹರಿದಿದ್ದಾಳೆ. ಅದಕ್ಕೆ ಇವಳಗೆ ದ್ಯುನದಿ ಎಂದು ಕರೆಯುತ್ತಾರೆ. ಎಂದೆಂದಿಗು ಬತ್ತದೆ ಇದ್ದ ನದಿ ಎಂದರೆ ಅದು ಗಂಗಾ ನದಿ. ಇವಳು ಹಿಮವಂತನ ಜೇಷ್ಠ ಪುತ್ರಿ ಆಗಿದ್ದಾಳೆ. ಭಗೀರಥನ ಪ್ರಯತ್ನದಿಂದ ಧರೆಗೆ ಬಂದವಳು. ನಂದಿನಿ, ನಲಿನಿ, ಸೀತಾ, ಮಾಲತಿ, ಮಲಾಪಹ ಎಂದು ಇವಳನ್ನು ಕರೆಯುವುದುಂಟು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ