ಭಾನುವಾರ, ಮೇ 31, 2009

ದಶಹರಾ ವ್ರತ ಮತ್ತು ಭಾಗಿರಥಿ ಜಯಂತಿ

ದಶಹರಾ ವ್ರತ

ಜೈಷ್ಠ -- ಶುಕ್ಲ -- ದಶಮಿ

ಈ ದಿನ, ಮಂಗಶವಾರ, ಹಸ್ತಾ ನಕ್ಷತ್ರದಲ್ಲಿ ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿದಳು. ಈ ದಿನ ವ್ಯತಿಪಾತ ಯೋಗ, ಗಜಕರಣ ಆನಂದಕರಣ, ಕನ್ಯಾರಾಶಿಯಲ್ಲಿ ಚಂದ್ರ ಹಾಗು ವೃಷಭ ರಾಶಿಯಲ್ಲಿ ರವಿ ಇರುವರು. ಇವೆಲ್ಲಾ ಸೇರಿ ಮಹಾ ಯೋಗ ಸಂಭವಿಸುತ್ತದೆ. ಹತ್ತು ವಿಧವಾದ ಪಾಪಗಳನ್ನು ಕಳೆದುಕೊಳ್ಳುವುದಕ್ಕಾಗಿ ನದಿಸ್ನಾನ, ತಿಲತರ್ಪಣ, ಗಂಗಾ ಪೂಜಾದಿಗಳನ್ನು ಮಾಡಬೇಕು. ಹತ್ತು ವಿಧವಾದ ಪಾಪಗಳಲ್ಲಿ ಮೂರು ರೀತಿಯ ಪಾಪಗಳು --

೧. ಕಾಯಿಕ -- ಅಂದರೆ ದೇಹದಿಂದ ಸಂಭವಿಸಬಹುದಾದ ಪಾಪ. ಇದರಲ್ಲಿ, ಒಬ್ಬ ತಾನು ಪರರಿಗೆ ಏನನ್ನು ಕೊಡದೆ ಕೇವಲ ಅವರಿಂದ ಸ್ವೀಕಾರ ಮಾಡುವುದು. ಹಿಂಸೆಯನ್ನು ಮಾಡುವುದು, ಪರಸ್ತ್ರೀ ಸೇವನ ಮಾಡುವುದು, ಈ ರೀತಿಯಾದ ಮೂರು ಪಾಪಗಳು ಬರುತ್ತವೆ.
೨. ವಾಚಕ -- ಅಂದರೆ ಮಾತಿನಿಂದ ಆಗುವ ಪಾಪ. ಕ್ರೂರವಾಗಿ ನುಡಿಯುವುದು, ಸುಳ್ಳು ಹೇಳಿವುದು, ಚಾಡೀ ಹೇಳುವುದು.ಅಸಂಬಂಧವಾಗಿ ಮಾತನಾಡುವುದು, ಈ ನಾಲ್ಕು ವಾಚಕ ಪಾಪಗಳು.
೩. ಮಾನಸಿಕ -- ಅಂದರೆ ವಿಚಾರದಿಂದಾಗುವ ಪಾಪ. ಪರರ ಸಂಪತ್ತನ್ನು ಅಪಹಾರ ಮಾಡುವುದರಲ್ಲಿ ಮನಸ್ಸು ಮಾಡುವುದು, ಮನಸ್ಸಿನಲ್ಲಿಯೆ ಅನ್ಯರಿಗೆ ಕೆಟ್ಟು ಬಯಸುವುದು, ವ್ಯರ್ಥವಾಗಿ ಮನಸ್ಸಿನ ಆವೇಶ ಹೊಂದುವುದು -- ಈ ಮೂರು ಮಾನಸಿಕ ಪಾಪಗಳು.

ಈ ರೀತಿಯಾಗಿ ದಶವಿಧ ಪಾಪಗಳಿವೆ. ಆ ಪಾಪಗಳು ನಷ್ಠವಾಗುವುದಕ್ಕೆ ದಶಹರಾವನ್ನು ಆಚರಿಸಬೇಕು. ಹಿಂದಿನ ಹತ್ತು ಜನ್ಮಗಳಲ್ಲಿ ಸಂಗ್ರಹವಾದ ಬ್ರಹ್ಮ ಹತ್ಯೆಗೆ ಸಮಾನವಾದ ಪಾಪಗಳು ಸ್ನಾನ ಮಾತ್ರದಿಂದಲೇ ನಾಶವಾಗುವುದರಿಂದ ಕೂಡ ಇದನ್ನು ದಶಹರಾ ಎಂದು ಕರೆಯಲಾಗಿದೆ.

ಭಾಗಿರಥಿ ಜಯಂತಿ

ಜೈಷ್ಠ -- ಶುಕ್ಲ -- ದಶಮಿ

ದೇವತೆಗಳ ಲೋಕದಲ್ಲಿ ಸಂಚರಿಸುವ ಸ್ವರ್ಧುನಿಯಾದ ಗಂಗಾದೇವಿಯು ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಬಂದ ದಿನ. ಭಗೀರಥ ತನ್ನ ಪೂರ್ವಿಕರ ಉದ್ಧಾರವಾಗಬೇಕೆಂದು ಸತತ ಪ್ರಯತ್ನ ಮಾಡಿ ಅವಳನ್ನು ಭೂಮಿಗೆ ಕರೆತಂದ ದಿವಸವೇ ಭಾಗೀರಥಿ ಜಯಂತಿ. ಗಂಗೆಯು ಭಗೀರಥನ ಪ್ರಾರ್ಥನೆಯಂತೆ ಪ್ರತಿಪದೆಯ ದಿನ ಭೂಮಿಯಲ್ಲಿ ಪ್ರಕಳಾಗಿ, ದಶಮೆಯ ದಿನ ಪ್ರವಾಹ ರೂಪವನ್ನು ಧರಿಸಿದಳು. ಆದ್ದರಿಂದ ಪ್ರತಿಪದಾದಿಂದ ದಶಮಿಯವರೆಗಿನ ದಿನಗಳು ಅತ್ಯಂತ ಶುದ್ಧವಾದ ದಿನಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ