ಸೋಮವಾರ, ಏಪ್ರಿಲ್ 27, 2009

ಅಕ್ಷಯ ತೃತಿಯಾ ಮಹತ್ವ

ಅಕ್ಷಯ ತೃತಿಯಾ

ವೈಶಾಖ ಶುಕ್ಲ ತೃತಿಯಾ, ಕೃತಿಕಾ ನಕ್ಷತ್ರ, ಸೌಭಾಗ್ಯ ಯೋಗ ತೈತಿಲಕರಣ.

ಅಕ್ಷಯ ತೃತಿಯಾ ಇದು ಕೃತಯುಗದ ಮೊದಲನೆಯ ದಿನವೆಂದು ಪರಿಗಣಿಸಲಾಗುತ್ತದೆ. ಆ ದಿನದಲ್ಲಿ ಮಾಡಿದ ಎಲ್ಲ ಕರ್ಮಗಳು ಕೂಡ ಅಕ್ಷಯವಾಗುತ್ತದೆ ಎಂದು ಶಾಸ್ತ್ರ ಹೇಳಿದೆ. ಇದು ವರ್ಷಕ್ಕೆ ಒಂದು ಬಾರಿ ಬರುವ ದಿನ. ಇವತ್ತು ಅದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನ ಮಾಡಬೇಕು. ಏಕೆಂದರೆ ಆ ದಿನ ಮಾಡಿದ ಕೆಟ್ಟ ಕೆಸಲಗಳು ಅವು ವರ್ಷ ಪೂರ್ತಿ ಮುಂದು ವರೆಯುತ್ತವೆ. ವಿಶೇಷವಾಗಿ ಇವತ್ತು ಗಂಗಾಸ್ನಾನ, ತೀರ್ಥದರ್ಶನ, ಹೋಮ-ಹವನಗಳನ್ನು ಮಾಡುವುದಿದೆ. ಅಕ್ಕಿಯ ದಾನ ಕೂಡ ಮಾಡಬೇಕು.

"ಯಃ ಪಶ್ಯತಿ ತೃತಿಯಾಯಾಂ ಕೃಷ್ಣಂ ಚಂದನ ಭೂಷಿತಮ
ವೈಶಾಖಸ್ಯ ನೀತೇ ಪಕ್ಷೇಸಯಾತ್ಯಂಚ್ಯಚ್ಯುತ ಮಂದಿರಂ"

ಅರ್ಥ - ಶ್ರೀ ಕೃಷ್ಣನನ್ನು ಗಂಧದಿದಂದ ಪೂರ್ತಿಯಾಗಿ ಅಲಂಕಾರ ಮಾಡಿ ಆರಾಧಿಸಿದರೆ ವೈಕುಂಠ ಲೋಕ ಪ್ರಾಪ್ತಿಯಾಗುಗವುದು.

ಅಕ್ಷಯ ತೃತಿಯಾ ದಿನ ಅಲ್ಪ ಜಪ, ದಾನ, ಅಧ್ಯಯನ ಅಕ್ಷಯವಾಗಿ ಪರಿಣಮಿಸುವುದು. ಈ ದಿನಕ್ಕೆ ರೋಹಿಣಿ ನಕ್ಷತ್ರವು ಹಾಗೂ ಬುಧವಾರ ಮಹಾಪುಣ್ಯಕರವು. ಈ ದಿನವು ಮಹಾ ಪುಣ್ಯ ಮುಹೂರ್ತದಲ್ಲಿ ಒಂದಾಗಿದೆ. ಅವತ್ತು ಎಲ್ಲ ವಿಧವಾದ ಕಾರ್ಯಗಳನ್ನು ಆರಂಭಿಸಬಹುದು. ವಿಶೇಷವಾಗಿ ಜಲಕುಂಭ ದಾನವನ್ನು ಮಾಡಬೇಕು. (ಇದರ ಕಾರಣ ಮತ್ತು ಮಹತ್ವ ಅದಷ್ಚು ಬೇಗ ಪ್ರಕಟಿಸಲಾಗುತ್ತದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ