ಸೋಮವಾರ, ಮಾರ್ಚ್ 23, 2009

ಚೈತ್ರ ಮಾಸದ ಮಹತ್ವ

ಚೈತ್ರ ಮಾಸದ ಮದತ್ವ

ಭವಿಷ್ಯೊತ್ತರ ಪುರಾಣದಲ್ಲಿ ಬಂದ ಚೈತ್ರಮಾಸದ ವಿಚಾರದಲ್ಲಿ ಈ ರೀತಿಯಾಗಿ ವರ್ಣನೆ ಇದೆ:

ವೈಶಾಖಾತ್ ಕಾರ್ತಿಕಃ ಶ್ರೇಷ್ಠಃ ಕಾರ್ತಿಕಾತ್ ಮಾಘ ಎವ ಚ
ಮಾಘಮಾಸಾದ್ ವರಶ್ಚಾಯಂ ಚೈತ್ರಮಾಸೋ ಭವಿಷ್ಯತಿ.

ವೈಶಾಖಕ್ಕಿಂತ ಕಾರ್ತಿಕ ಶ್ರೇಷ್ಠ ಕಾರ್ತಿಕಕ್ಕಿಂತ ಮಾಘ ಶ್ರೇಷ್ಠ ಮಾಘ ಮಾಸಕ್ಕಿಂತಲೂ ಚೈತ್ರ ಇದು ಶ್ರೇಷ್ಠ. ಈ ಮಾಸದಲ್ಲಿ ಮಾಡಿದ ಸತ್ಕಾರ್ಯ, ಸತ್ ಪಾತ್ರರಿಗೆ ದಾನಮಾಡಿದ್ದು, ಯಜ್ಞಯಾಗಾದಿಗಳನ್ನು ಮಾಡಿದ್ದು, ತೀರ್ಥ ಕ್ಷೇತ್ರದಲ್ಲಿ ಸ್ನಾನ ಮಾಡಿದ್ದು, ಶಾಸ್ತ್ರ ವಿಚಾರ ಮಾಡಿದ್ದು ಎಲ್ಲವೂ ಕೋಟಿ ಪಟ್ಟು ಅಧಿಕ ಫಲಪ್ರದವಾಗುತ್ತದೆ. ಅದರಲ್ಲಿಯೂ ಇವೆಲ್ಲವನ್ನು ಅಯೋಧ್ಯದಲ್ಲಿ ಮಾಡಿದರೆ ಇನ್ನೂ ವಿಶೇಷ.

ಹನ್ನೆರಡು ಮಾಸಗಳಲ್ಲಿ ಮೊದಲನೆಯಾದ ಈ ಚೈತ್ರ ಮಾಸವು ಸಕಲ ಜೀವರಾಶಿಗೆ ಇಷ್ಟವಾದುದನ್ನು ಕೊಡುತ್ತಾ ತಾಯಿಯಂತೆ ಶೋಭಿಸುತ್ತದೆ. ಧರ್ಮಪ್ರವರ್ತಕರಾದ ಪ್ರಭು ಶ್ರೀ ರಾಮಚಂದ್ರನು ಈ ಮಾಸದಲ್ಲಿ ಅವತರಿಸಲು, ಸಂತುಷ್ಟರಾದ ದೇವತೆಗಳು ಹಾಗೂ ಸಜ್ಜನರೆಲ್ಲರೂ ದೇವದೇವೋತ್ತಮರಾದ ಆ ಪುರಾಣ ಪುರುಷನನ್ನು ವಿವಿಧ ರೀತಿಯಿಂದ ಸ್ತುತಿಸಿದರು. ಗೀತ - ವಾದ್ಯ- ನೃತ್ಯಗಳೊಂದಿಗೆ ಪ್ರಸನ್ನಗೊಳಿಸಿದರು. ಚೈತ್ರ ಮಾಸದ ಹಿರಿಮೆಯನ್ನು ಕೊಂಡಾಡಿ, ಆ ಮಾಸಕ್ಕೆ ವಿಶೇಷವಾದ ವರದಾನ ಕೊಡುವಂತೆ ಪ್ರಾರ್ಥಿಸಿದರು. ಆಗ ಪ್ರಸನ್ನನಾದ ಶ್ರೀರಾಮಚಂದ್ರನು -

ಸರ್ವೇಷಾಮೇವ ಮಾಸಾನಾಂ ಶ್ರೇಷ್ಠಾಶ್ಚಾಯಂ ಭವಿಷ್ಯತಿ
ಅಯೋಧ್ಯಾಯಾಂ ರಾಮತೀರ್ಥ ಸರಯಾಜಲ ಮಧ್ಯಗೇ
ಚೈತ್ರಸ್ನಾನಂ ಪ್ರರುರ್ವಾಣಾ ಸ್ತ್ರೀ ನರಾ ಮೋಕ್ಷಭಾಗಿನಃ

ಎಲ್ಲ ಮಾಸಗಳಿಗೆ ತಾಯಿಯಂತೆ ಇರುವ ಚೈತ್ರ ಮಾಸವು ಮಾಸಗಳಲ್ಲಿ ಶ್ರೇಷ್ಠವಾಗುವಂತೆ ವರದಾನ ಮಾಡಿದನು. ಅಷ್ಠೇ ಅಲ್ಲದೇ ತಾನು ಸ್ವತಃ ಅದೇ ಮಾಸದಲ್ಲಿ ಅವತಾರ ಮಾಡಿದನು. ಅಯೋಧ್ಯಯಲ್ಲಿರುವ ಸರಯೂ ನದಿ (ರಾಮತೀರ್ಥ) ಅಲ್ಲಿ ಸ್ನಾನ ಮಾಡಿದವರಿಗೆ, ಅವರಿಗೆ ಬರುವ ಎಲ್ಲ ಆಪತ್ತುಗಳನ್ನು ದೂರ ಮಾಡುತ್ತೇನೆ ಎಂದು ಹೇಳಿದ್ದಾನೆ.

ಚೈತ್ರ ಮಾಸದಲ್ಲಿ ಮಾಡಬೇಕಾದ ಕಾರ್ಯಗಳು

ಮಾರ್ಗದಲ್ಲಿ ಹೋಗುವವನಿಗೆ ನೀರಿನ ವ್ಯವಸ್ಥೆ (ಅರವಟ್ಟಿಗೆ)
ಬಿಸಿಲಿನಲ್ಲಿ ಬಂದವರಿಗೆ ಒಳ್ಳೆಯ ನೆರಳಿನ ವ್ಯವಸ್ಥೆ
ಊಟವಿಲ್ಲದವನಿಗೆ ಊಟ ವಸತಿ ವ್ಯವಸ್ಥೆ

ನೀರು ದಾನ ಮಾಡದೆ ಇದ್ದಲ್ಲಿ ಅವನು ಮುಂದೆ ಜಾತಕ ಪಕ್ಷಿಯಾಗಿ ಹುಟ್ಟಿ ನೀರಿಗಾಗಿ ಪರದಾಡುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಿಲಾಗಿದೆ.
ಗೋದಿ, ಹಾಸಿಗೆ (ಶಯ್ಯಾ), ಬೆಲ್ಲ, ತುಪ್ಪ, ಮೊಸರು, ನೆಲ್ಲಿಕಾಯಿ, ಮಾವು ಇವೆ ಮೊದಲಾದವುಗಳು ವಿಶೇಷ ಪುಣ್ಯಕಾರಿ.

ಚೈತ್ರ ಮಾಸದಲ್ಲಿ ಅಯೋಧ್ಯಾ ಪಟ್ಟಣದಲ್ಲಿ ಇರುವ ಸರಯೂ ನದಿಯಲ್ಲಿ (ರಾಮತೀರ್ಥದಲ್ಲಿ) ಸ್ನಾನ ಮಾಡಬೇಕು. ವಿಶೇಷವಾಗಿ ರಾಮಾಯಣ ಶ್ರವಣ ಮಾಡಬೇಕು.
ಶ್ರಾಸ್ತ್ರದ ಒಂದು ಶ್ಲೋಕದಲ್ಲಿ ಈ ರೀತಿ ಹೇಳಲಾಗಿದೆ

ಸರ್ವ ತೀರ್ಥೇಷು ಯತ್ ಪುಣ್ಯಂ ಸರ್ವ ದಾನೇಷು ಯತ್ ಫಲಂ |
ರಾಮಾಯಣಸ್ಯ ಪಠಣಾತ್ ತತ್ ಫಲಂ ನವರಾತ್ರಕೇ ||

ಇದರ ಅರ್ಥ :

ಎಲ್ಲ ತೀರ್ಥಗಳಲ್ಲಿ ಹೋಗಿ ಸ್ನಾನಾದಿಗಳನ್ನು ಮಾಡಿದರೆ ಯಾವ ವಿಶಿಷ್ಠ ಪುಣ್ಯ ಪ್ರಾಪ್ತವಾಗುವುದೋ, ಎಲ್ಲ ದಾನಗಳನ್ನು ಮಾಡಿದರೇ ಯಾವ ಪುಣ್ಯ ಪ್ರಾಪ್ತವಾಗುವುದೋ, ಆ ಪುಣ್ಯ ರಾಮಾಯಣ ಶ್ರವಣದಿಂದ ಬರುತ್ತದೆ.

ಈ ಮಾಸದಲ್ಲಿ ಬರುವ ಮುಖ್ಯ ದಿನಗಳು:

೧) ಯುಗಾದಿ -- ಶುಕ್ಲ ಪ್ರತಿಪದ
೨) ಗೌರಿ ತೃತಿಯಾ -- ಶುಕ್ಲ ತೃತಿಯಾ
೩) ರಾಮನವಮಿ -- ಶುಕ್ಲ ನವಮಿ
೪) ಏಕಾದಶಿ
೫) ಹನುಮ ಜಯಂತಿ -- ಹುಣ್ಣಿಮೆ -- ದವನದ ಹುಣ್ಣಿಮೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ