ಭಾನುವಾರ, ಮೇ 31, 2009

ನರಸಿಂಹ ಜಯಂತಿ

ನರಸಿಂಹ ಜಯಂತಿ

ವೈಶಾಖ ಶುದ್ಧ ತ್ರಯೋದಶಿ ಚಿತ್ತಾ ನಕ್ಷತ್ರ ವಜ ಸಿದ್ಧಿ ಯೋಗಗಳು ತೈತಲಿಕರಣದಂದು ನರಸಿಂಹ ಜಯಂತಿ. ನರಸಿಂದ ರೂಪಿಯಾಗಿ ಅವತಾರ ಮಾಡಿದ ದಿವಸ.

ದುಷ್ಟನಾದ ಹಿರಣ್ಯಕಶಪುವನ್ನು ಸಂಹಾರ ಮಾಡುವುದಕ್ಕೆ ಅವತಾರ ಮಾಡಿದ ದೇವರು ಎಲ್ಲೆ ಇದ್ದರೂ ಸಜ್ಜನರ ಸಂರಕ್ಷಣೆಯನ್ನು ಮಾಡುತ್ತಾರೆ. ಕಂಬದಿಂದ ಹೊರಗೆ ಬಂದು ದೈತ್ಯನನ್ನು ಸಂಹರಿಸಿ ಪ್ರಲ್ಹಾದನನ್ನು ಅನುಗ್ರಹಿಸಿದ ಈ ನರಸಿಂಹ ರೂಪವನ್ನು ನೆನೆಸುವಾಗ ಪ್ರಲ್ಹಾದನನ್ನು ಮರೆಯುವಂತಿಲ್ಲ. ನರಸಿಂಹ ದೇವರನ್ನು ನೆನೆಸುವುದರಿಂದ ಎಲ್ಲ ತರಹದ ಪಾಪಗಳು ಹೋಗಿತ್ತವೆ. ಯಾವ ಗ್ರಹಗಳ ಭಾದೆ ಆಗುವುದಿಲ್ಲ. ಒಳಗೆ ಮನೆ ಮಾಡಿಕೊಂಡಿದ್ದ ಶತ್ರುಗಳು ಭಸ್ಮರಾಗುತ್ತಾರೆ. ಹೊರಗೆ ಇರುವ ಶತ್ರುಗಳು ದೂರ ಪಲಾಯನಗೈಯುತ್ತಾರೆ. ಅನೇಕ ವಿಧವಾದ ರೋಗಗಳು ದೂರವಾಗುತ್ತವೆ. ನವಗ್ರಹಗಳಲ್ಲಿ ಒಂದಾದ ಶನಿಯಪ ತಾನೇ ಸ್ವತಃ ನರಸಿಂಹ ದೇವರ ಮೇಲೆ ಸ್ತೋತ್ರವನ್ನು ಮಾಡಿದ್ದಾನೆ. ಅದರಲ್ಲಿ ಅವನೇ ನರಸಿಂಹ ದೇವರನ್ನು ನೆನೆಸಿದವರನ್ನು ನಾನು ಕಾಡುವುದಿಲ್ಲಾ ಎಂದು ಹೇಳಿದ್ದಾನೆ. ಇಂದಿನ ದಿನ ನರಸಿಂಹ ದೇವರನ್ನು ನೆನೆಯದೆ ಯಾರೂ ಇರಬಾರದು. ಎಷ್ಟೇ ವತ್ತಡ ಇದ್ದರೂ ಕೂಡ ಅವನ್ನು ನೆನಿಸಲೇಬೇಕು. ಇಲ್ಲದಿದ್ದರೆ ನಿಮಗೆ ಶತ್ರುಭಯ, ಶನಿಯ ಗ್ರಹಚಾರ, ರೋಗ, ಆಕಸ್ಮಿತವಾಗಿ ಬರುವ ಆಪತ್ತು ತಪ್ಪಿದ್ದಲ್ಲಾ. ಅನೂಕೂಲವಾದರೆ ಹೋಮವನ್ನೂ ಮಾಡಬೇಕು. ಆಗದಿದ್ದರೆ, ಹೋಮ ಆಗುವ ಸ್ಥಳಕ್ಕೆ ಹೋಗಬೇಕು.

ಗಂಗೋತ್ಪತ್ತಿ

ಗಂಗೋತ್ಪತ್ತಿ

ವೈಶಾಖ ಶುದ್ಧ ಸಪ್ತಮಿ, ಪುಶ್ಯನಕ್ಷತ್ರ, ಶೂಲಯೋಗ, ಗಜಕರಣದಂದು

ಜಹ್ನುರಾಜನು ರಭಸದಿಂದ ಬಂದು ಅವನ ಯಜ್ಞವಾಟವನ್ನೆಲ್ಲ ಆವರಿಸಿದಾಗ ಕ್ರೋಧದಿಂದ ಎಲ್ಲ ಜಲವನ್ನು ಪಾನಮಾಡಿದ ಮತ್ತೆ ಭಗೀರಥ ಪ್ರಾರ್ಥನೆ ಮಾಡಿದಾಗ ತನ್ನ ಬಲದಿಂದ ಹೊರಗೆ ಹಾಕಿದ ದಿನ ಇದು.

ನದಿಗಳಲ್ಲಿ ಶ್ರೇಷ್ಠವಾದ "ಗಂಗಾ" ಹುಟ್ಟಿದ ದಿವಸ. ಅವತ್ತು ಗಂಗೆಯ ಸ್ಮರಣೆಯನ್ನು ಮಾಡಬೇಕು. ಅವಳು ಭೂಮಿಗೆ ಬಂದು ಎಲ್ಲರ ಪಾಪಗಳನ್ನು ಕಳೆಯುವುದಕ್ಕಾಗಿ ಸಿದ್ಧಳಾಗಿದ್ದಾಳೆ. ನಾವು ಅವಳನ್ನು ೧೦೦ ಯೋಜನೆಗಳ ದೂರದಲ್ಲಿದ್ದು ನಮ್ಮ ಮನೆಯಲ್ಲಿ ಮಾಡುವ ಸ್ನಾನ ಕಾಲದಲ್ಲಿ ನಾವು ನೆನಪಿಸಿದಾಗಲು ಅವಳು ಆ ಜಲದಲ್ಲಿ ಸನ್ನಿಹಿತಳಾಗುತ್ತಾಳೆ. ಆ ಜಲದಿಂದ ನಾವು ಸ್ನಾನ ಮಾಡಿದಾಗ ನಮ್ಮ ಪಾಪಗಳು ಕಳೆಯುತ್ತವೆ. ಇವೆಲ್ಲಾ ಕೇವಲ ಗಂಗೆಯ ನಾಮಸ್ಮರಣೆಯಿಂದಲೆ ನೆರವೇರುವ ಕಾಯಕ. ಇವಳು ದೇವತೆಗಳ ಲೋಕದಲ್ಲಿಯು ಹರಿದಿದ್ದಾಳೆ. ಅದಕ್ಕೆ ಇವಳಗೆ ದ್ಯುನದಿ ಎಂದು ಕರೆಯುತ್ತಾರೆ. ಎಂದೆಂದಿಗು ಬತ್ತದೆ ಇದ್ದ ನದಿ ಎಂದರೆ ಅದು ಗಂಗಾ ನದಿ. ಇವಳು ಹಿಮವಂತನ ಜೇಷ್ಠ ಪುತ್ರಿ ಆಗಿದ್ದಾಳೆ. ಭಗೀರಥನ ಪ್ರಯತ್ನದಿಂದ ಧರೆಗೆ ಬಂದವಳು. ನಂದಿನಿ, ನಲಿನಿ, ಸೀತಾ, ಮಾಲತಿ, ಮಲಾಪಹ ಎಂದು ಇವಳನ್ನು ಕರೆಯುವುದುಂಟು.

ಪರಶುರಾಮ ಜಯಂತಿ

ಪರಶುರಾಮ ಜಯಂತಿ

ವೈಶಾಖ ಶುಕ್ಲ ತೃತಿಯಾ
ಕೃತ್ತಿಕಾ ನಕ್ಷತ್ರ, ಸೌಭಾಗ್ಯ ಯೋಗ, ತೈತಿಲಕರಣ

ಪರಶುನಾಮಕನಾಗಿ ಪರಮಾತ್ಮನೆ ಅವತರಿಸಿದ ದಿನ. ಜಗತ್ತಿನಲ್ಲಿ ಯಾವ ಕರ್ತವ್ಯಚ್ಯತರಾದ ದುಷ್ಟ ಕ್ಷತ್ರಿಯರಿದ್ದರೋ, ಯಾರಿಂದ ಪ್ರಜೆಗಳಿಗೆ ತೊಂದರೋಯಾಗುತ್ತಿತ್ತೋ ಆಂತಹ ಪಾಪಿಷ್ಟ ರಾಜರನ್ನು ಸಂಹರಿಸಿ ಉಳಿದ ರಾಜರಿಗೆ ನೀತಿ ಭೋದನೆಯನ್ನು ಮಾಡುವುದಕ್ಕಾಗಿ ದೇವರು ಅವತರಿಸಿದ ದಿನ. "ಪರಶು" ಎಂದರೆ ಇದು ಸಂಸ್ಕೃದ ಶಬ್ದ. ಅದರ ಕನ್ನಡ ಅರ್ಥ "ಕೊಡ್ಡಲಿ"ಎಂದು ಅದನ್ನು ಹಿಡಿದುದದ್ದಕ್ಕೆ ಅವನನ್ನು ಪರಶು-ರಾಮ ಎಂದು ಕರೆಯಲ್ಪಟ್ಟಿತು. ಇವನು ಜಮದಗ್ನಿ ಋಷಿಗಳ ಹಾಗೂ ರೇಣುಕಾ ದೇವಿಯಲ್ಲಿ ಅವತರಿಸಿದ. ಇವನು ೨೧ ಸಲ ಭೂ ಪ್ರದಕ್ಷಿಣೆಯನ್ನು ಮಾಡಿದಾಗ ಸಂಹಾರ ಪೂರ್ಣಗೊಂಡಿತು. ಇವತ್ತಿನ ದಿನ ಅವನನ್ನು ದುಷ್ಚ ಭಂಜಕನೆಂದು ತಿಳಿದು ಚಿಂತಿಸಬೇಕು.

ಜಮದಗ್ನಿ ಸಂತೋವೀರ ಕ್ಷತ್ರಿಯಾಂತಕರ ಪ್ರಭೋ |
ಗ್ರಹಣಾರ್ಘ್ಯಂ ಮಯಾ ದತ್ತಂ ಕೃಪಯಾ ಪರಮೇಶ್ವರ ||

ಅರ್ಥ :- ಜಮದಗ್ನಿಯ ಮಗನೆ, ವೀರನೆ, ದುಷ್ಟ ಕ್ಷತ್ರಿಯರಿಗೆ ಯಮನಂತಿರುವವನೆ, ನಾನು ಕೊಂಡುವ ಅರ್ಘ್ಯವನ್ನು ಸ್ವೀಕರಿಸಿ ನನಗೆ ದುಷ್ಟರ ಭಾಧ ಇಲ್ಲದಂತೆ ಮಾಡು. ನನ್ನನ್ನು ಯಾವಾಗಲು ಅಂತಹ ದುಷ್ಟರಿಂದ ದೂರ ಇಡು. ದುಷ್ಟ ವಿಚಾರಗಳು, ದುಷ್ಟ ಆಚಾರಗಳು ನನ್ನಿಂದ ಆಗದೆ ಇದ್ದಂತೆ ನನ್ನನ್ನು ಕಾಪಾಡು ಎಂದು ಆತನನ್ನು ಪ್ರಾರ್ಥಿಸುವುದೇ ಈ ದಿನದ ವಿಶೇಷ. ಎಲ್ಲರು ಈ ಪ್ರಾರ್ಥನೆಯನ್ನು ಅವಶ್ಯವಾಗಿ ಮಾಡಬೇಕು. ಇವತ್ತಿನ ಜಗತ್ತಿನಲ್ಲಿ ಯಾರಿಗೆ "ದುಷ್ಟ" ಶಬ್ದದ ಪರಿಚಯವಿಲ್ಲ ಹೇಳಿ? ಇವತ್ತು ಶಬ್ದದ ಪರಿಚಯ ನಾಳೆ ದುಷ್ಟತನದ ಅನುಭವ. ಅದನ್ನು ದೂರದಲ್ಲಿ ಎಸೆಯುವುದಕ್ಕಾಗಿ ಈ ಪ್ರಾರ್ಥನೆ.