ವೈಶಾಖ-ಮಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವೈಶಾಖ-ಮಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 31, 2009

ಶನೈಶ್ವರ ಜಯಂತಿ

ಶನೈಶ್ವರ ಜಯಂತಿ

ವೈಶಾಖ -- ಅಮವಾಸ್ಯ - ಕೃತ್ತಿಕಾ ನಕ್ಷತ್ರ - ಅತಿಗಂಡಯೋಗ

ಒಂಬತ್ತು ಗ್ರಹಗಳಲ್ಲಿ ಒಬ್ಬ ಶನಿ. ಇವನ ಪರಿಚಯ ಬಹಳ ಏನು ಬೇಕಾಗಿಲ್ಲಾ. ಪ್ರಾಯ ಮನುಷ್ಯ ತನ್ನ ಜೀವನದಲ್ಲಿ ಶನಿಯ ಅನುಗ್ರಹ ಹಾಗೂ ನಿಗ್ರಹಗಳಿಗೆ ಪಾತ್ರನಾಗಿರುವುದು ಸಹಜ. ಶನಿ ಏನನ್ನು ಮಾಡಬಲ್ಲ. ಬಹಳ ಶ್ರೀಮಂತನಾಗಿದ್ದರೆ ಅವರಿಂದ ದುಷ್ಟ ಕಾರ್ಯಗಳನ್ನು ಮಾಡಿಸಿ ಅವರಿಗೆ ಅಧೋಗತಿ ತರಬಹುದು, ಆರೋಗ್ಯದಲ್ಲಿ ವ್ಯತ್ಯಾಸ ಮಾಡಬಹುದು. ಆಕಸ್ಮಿಕವಾಗಿ ಮರಣವು ಬರಬದುದು. ಎಲ್ಲ ಗ್ರಹಗಳಿಗಿಂತ ನಮಗೆ ಫಲಾಫಲಗಳನ್ನು ನೆನಪಿಡುವಂತೆ ಮಾಡುವವನು ಶನೈಶ್ವರ. ಇವನು ರಾಶಿಗಳಲ್ಲಿ ಮಕರ, ಕುಂಭಗಳಿಗೆ ಅಧಿಪತಿಯಾಗಿದ್ದಾನೆ. ಇವನ ನಾಮಕರಣ ಮಾಡಿದ್ದು ಇವನ ಚಲನವನ್ನನುಸರಿಸಿ. ಶನೈ ಚರತಿ ಇತಿ ಶನೈಶ್ವರಃ -- ಸಂಸ್ಕೃತದಲ್ಲಿ ಶನೈ ಎಂದರೆ ನಿಧಾನ ಎಂದರ್ಥ. ಇವನು ಚಲಿಸುವ ವಿಧಾನವು ನಿಧಾನ. ಇವನು ಒಂದು ರಾಷಿಯಲ್ಲಿ ೨-೧/೨ (ಎರಡೂ ವರೆ) ವರ್ಷ ಇರುತ್ತಾನೆ. ಅಲ್ಲದೆ ಅವನಿದ್ದ ರಾಶಿಗಿಂತ ಹಿಂದಿನ ರಾಶಿ ಹಾಗು ಮುಂದಿನ ರಾಶಿಯನ್ನು ಇದ್ದ ರಾಶಿಯಿಂದಲೇ ಪ್ರೇಕ್ಷಿಸುತ್ತಾನೆ. ಆದ್ದರಿಂದ ಶನಿಯ ಫಲ ೭ (ಏಳು) ವರ್ಷ ಇರುತ್ತವೆ. ಇವನು ರವಿ-ಛಾಯಾದೇವಿಯ ಮಗನಾಗಿ, ದಕ್ಷ ಪ್ರಜಾಪತಿಯ ಮೊಮ್ಮಗನಾಗಿ ಹುಟ್ಟಿದ. ಇವನು ನರಸಿಂಹ ದೇವರ ಪರಮಭಕ್ತ ಹಾಗೂ ಅವರ ಸ್ತೋತ್ರವನ್ನೂ ಮಾಡಿದ್ದಾನೆ. ನರಸಿಂಹ ದೇವರ ಭಕ್ತರನ್ನು ಹಾಗು ಆಂಜನೇಯ ಸ್ವಾಮಿಯ ಭಕ್ತರನ್ನು ಇವನು ಯಾವ ಕಷ್ಟಕ್ಕೂ ಗುರಿಪಡಿಸುವುದಿಲ್ಲಾ ಎಂದು ಹೇಳಿದ್ದಾನೆ. ನರಸಿಂದ ಸ್ತೋತ್ರದಲ್ಲಿ ಈ ರೀತಿ ಹೇಳಿದ್ದಾನೆ --- "ಯಾರು ಸ್ನಾನ ಸಂಧ್ಯಾವಂದನೆ, ದಾನ, ತೀರ್ಥ ಕ್ಷೇತ್ರಗಳ ಸಂದರ್ಸನ, ಸಜ್ಜನರ ಸಂಗ, ನಿರಂತರ ನಿನ್ನ ನಾಮಸ್ಮರಣೆ ಮಾಡುವವರೋ, ನಾನು ಅವರನ್ನು ಕಾಡುವುದಿಲ್ಲಾ. ಯಾರು ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಾರೆಯೋ ಅವರನ್ನು ಸಂಪೂರ್ಣ ಕೆಳಗೆ ಹಾಕುತ್ತೇನೆಠ ಎಂದು ಹೇಳಿದ್ದಾನೆ. ಇದಕ್ಕೆ ಸ್ವಾಮಿ ನರಸಿಂಹ ದೇವರು ಅನುಮತಿ ಕೊಟ್ಚಿದ್ದಾರೆ. ಅದಕ್ಕಾಗಿ ಜಪ-ತಪ-ದಾನ-ಧರ್ಮಗಳನ್ನು ಮಾಡಬೇಕು. ಇದರಲ್ಲಿ ಆಲಸ್ಯವನ್ನು ತೋರಿಸಬಾರದು. ಅನುಕೂಲವಾದರೆ ನವಗ್ರಹ ಹೋಮ ಮಾಡಬೇಕು.

ವೇದವ್ಯಾಸ ಜಯಂತಿ

ವೇದವ್ಯಾಸ ಜಯಂತಿ

ವೇದಗಳನ್ನು ವಿಭಾಗ ಮಾಡಿದವರೇ ವೇದವ್ಯಾಸರು. ಈ ಅವತಾರವು ಇಂದೇ ಆಯಿತೆಂದು ಹೇಳಲಾಗಿದೆ. ವ್ಯಾಸರ ಬಗ್ಗೆ ಬಹಳ ಪರಿಚಯಿಸುವುದಿದೆ. ಮೊದಲಿಗೆ ಅವರನ್ನು ತಿಳಿಯಬೇಕಾಗಿದ್ದು ಜ್ಞಾನದ ನಿಧಿ ಎನ್ನುವುದಾಗಿ. ವೇದಗಳ ಸಾರವನ್ನು ಎಲ್ಲರಿಗೂ ತಿಳಿಯುವುದಕ್ಕಾಗಿ ಮಹಾಭಾರತ, ಭಾಗವತ, ಮೊದಲಾದ ಗ್ರಂಥಗಳನ್ನು ರಚಿಸಿದರು. ಅದನ್ನು ಪ್ರಚಾರ ಸುಮಂತು, ಜೈಮಿನಿ, ವೈಶಂಪಾಯನ, ಶುಕ ಇವರೆ ಮೊದಲಾದವರನ್ನು ಮುಂದೆ ಮಾಡಿದರು. ಇವರು ಸತ್ಯವತಿ ಹಾಗು ಪರಾಶರರ ಮಗನಾಗಿ ಯಮುನಾ ನದಿಯ ದ್ವೀಪದಲ್ಲಿ ಅವತರಿಸಿದರು. ಇವರು ೧೮ (ಹದಿನೆಂಟು) ಪುರಾಣಗಳನ್ನು ರಚಿಸಿದರು. ನಾವು ಒದಿದ ವಿದ್ಯೆ ಸಂರಕ್ಷಿತವಾಗಿರಬೇಕಾದರೆ ಇವರ ಸ್ತೋತ್ರ ನಾಮಸ್ಮರಣೆ ಅತ್ಯಗತ್ಯ.

ಕೂರ್ಮ ಜಯಂತಿ

ಕೂರ್ಮ ಜಯಂತಿ


ಕರ್ಮ ಹರಿಃ ಮಾಂ ನಿರಯಾತ ಅಶೇಷಾತ್

ಇದು ಭಗವಂತ ಅವತಾರವೆ. ಅವನು ಆಮೆಯ ರೂಪದಲ್ಲಿ ಬಂದು ಸಮುದ್ರ ಮಥನದ ವೇಳೆಯಲ್ಲಿ ಸಮುದ್ರದಲ್ಲಿ ಮುಳುಗುತ್ತಿರುವ ಆ ಬಂಗಾರದ ಪರ್ವತವನ್ನು ತನ್ನ ಬೆನ್ನಿನ ಮೇಲೆ ಧಾರಣ ಮಾಡಿದ. ಇದು ಒಂದಾದರೆ ಸಮಸ್ತ ಚೇತನಾಚೇತನಾತ್ಮಕವಾದ ಪ್ರಪಂಚವನ್ನೇ ತನ್ನ ಬೆನ್ನಿನ ಮೇಲೆ ಹೊತ್ತಿದ್ದಾನೆ. ಅಂತಹ ಭಗವಂತನನ್ನು ನೆನೆಸುವುದರಿಂದ ಎಲ್ಲ ಪಾಪಗಳು ನಿವೃತ್ತವಾಗುತ್ತವೆ. ಇದು ಹತ್ತಿ ಅವತಾರಗಳಲ್ಲಿಯೂ ಒಂದಾಗಿದೆ ಮತ್ತು ಕೂರ್ಣ ಪುರಾಣವೆಂದೇ ಪ್ರಸಿದ್ಧವಾಗಿದೆ. ಜೊತಿಷ್ಯ ಶಾಸ್ತ್ರಗಳಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಗೃಹರತವಾದ ವಾಸ್ತಿದೋಷ ಲಿವಾರಣೆಗೆ ಕೂರ್ಮವನ್ನು ಇಡುವುದುಂಟು. ಆ ಕೂರ್ಮರೂಪಿ ಭಗವಂತ ಅವತಾರ ಮಾಡಿದ ದಿನವುದು.

ನರಸಿಂಹ ಜಯಂತಿ

ನರಸಿಂಹ ಜಯಂತಿ

ವೈಶಾಖ ಶುದ್ಧ ತ್ರಯೋದಶಿ ಚಿತ್ತಾ ನಕ್ಷತ್ರ ವಜ ಸಿದ್ಧಿ ಯೋಗಗಳು ತೈತಲಿಕರಣದಂದು ನರಸಿಂಹ ಜಯಂತಿ. ನರಸಿಂದ ರೂಪಿಯಾಗಿ ಅವತಾರ ಮಾಡಿದ ದಿವಸ.

ದುಷ್ಟನಾದ ಹಿರಣ್ಯಕಶಪುವನ್ನು ಸಂಹಾರ ಮಾಡುವುದಕ್ಕೆ ಅವತಾರ ಮಾಡಿದ ದೇವರು ಎಲ್ಲೆ ಇದ್ದರೂ ಸಜ್ಜನರ ಸಂರಕ್ಷಣೆಯನ್ನು ಮಾಡುತ್ತಾರೆ. ಕಂಬದಿಂದ ಹೊರಗೆ ಬಂದು ದೈತ್ಯನನ್ನು ಸಂಹರಿಸಿ ಪ್ರಲ್ಹಾದನನ್ನು ಅನುಗ್ರಹಿಸಿದ ಈ ನರಸಿಂಹ ರೂಪವನ್ನು ನೆನೆಸುವಾಗ ಪ್ರಲ್ಹಾದನನ್ನು ಮರೆಯುವಂತಿಲ್ಲ. ನರಸಿಂಹ ದೇವರನ್ನು ನೆನೆಸುವುದರಿಂದ ಎಲ್ಲ ತರಹದ ಪಾಪಗಳು ಹೋಗಿತ್ತವೆ. ಯಾವ ಗ್ರಹಗಳ ಭಾದೆ ಆಗುವುದಿಲ್ಲ. ಒಳಗೆ ಮನೆ ಮಾಡಿಕೊಂಡಿದ್ದ ಶತ್ರುಗಳು ಭಸ್ಮರಾಗುತ್ತಾರೆ. ಹೊರಗೆ ಇರುವ ಶತ್ರುಗಳು ದೂರ ಪಲಾಯನಗೈಯುತ್ತಾರೆ. ಅನೇಕ ವಿಧವಾದ ರೋಗಗಳು ದೂರವಾಗುತ್ತವೆ. ನವಗ್ರಹಗಳಲ್ಲಿ ಒಂದಾದ ಶನಿಯಪ ತಾನೇ ಸ್ವತಃ ನರಸಿಂಹ ದೇವರ ಮೇಲೆ ಸ್ತೋತ್ರವನ್ನು ಮಾಡಿದ್ದಾನೆ. ಅದರಲ್ಲಿ ಅವನೇ ನರಸಿಂಹ ದೇವರನ್ನು ನೆನೆಸಿದವರನ್ನು ನಾನು ಕಾಡುವುದಿಲ್ಲಾ ಎಂದು ಹೇಳಿದ್ದಾನೆ. ಇಂದಿನ ದಿನ ನರಸಿಂಹ ದೇವರನ್ನು ನೆನೆಯದೆ ಯಾರೂ ಇರಬಾರದು. ಎಷ್ಟೇ ವತ್ತಡ ಇದ್ದರೂ ಕೂಡ ಅವನ್ನು ನೆನಿಸಲೇಬೇಕು. ಇಲ್ಲದಿದ್ದರೆ ನಿಮಗೆ ಶತ್ರುಭಯ, ಶನಿಯ ಗ್ರಹಚಾರ, ರೋಗ, ಆಕಸ್ಮಿತವಾಗಿ ಬರುವ ಆಪತ್ತು ತಪ್ಪಿದ್ದಲ್ಲಾ. ಅನೂಕೂಲವಾದರೆ ಹೋಮವನ್ನೂ ಮಾಡಬೇಕು. ಆಗದಿದ್ದರೆ, ಹೋಮ ಆಗುವ ಸ್ಥಳಕ್ಕೆ ಹೋಗಬೇಕು.

ಗಂಗೋತ್ಪತ್ತಿ

ಗಂಗೋತ್ಪತ್ತಿ

ವೈಶಾಖ ಶುದ್ಧ ಸಪ್ತಮಿ, ಪುಶ್ಯನಕ್ಷತ್ರ, ಶೂಲಯೋಗ, ಗಜಕರಣದಂದು

ಜಹ್ನುರಾಜನು ರಭಸದಿಂದ ಬಂದು ಅವನ ಯಜ್ಞವಾಟವನ್ನೆಲ್ಲ ಆವರಿಸಿದಾಗ ಕ್ರೋಧದಿಂದ ಎಲ್ಲ ಜಲವನ್ನು ಪಾನಮಾಡಿದ ಮತ್ತೆ ಭಗೀರಥ ಪ್ರಾರ್ಥನೆ ಮಾಡಿದಾಗ ತನ್ನ ಬಲದಿಂದ ಹೊರಗೆ ಹಾಕಿದ ದಿನ ಇದು.

ನದಿಗಳಲ್ಲಿ ಶ್ರೇಷ್ಠವಾದ "ಗಂಗಾ" ಹುಟ್ಟಿದ ದಿವಸ. ಅವತ್ತು ಗಂಗೆಯ ಸ್ಮರಣೆಯನ್ನು ಮಾಡಬೇಕು. ಅವಳು ಭೂಮಿಗೆ ಬಂದು ಎಲ್ಲರ ಪಾಪಗಳನ್ನು ಕಳೆಯುವುದಕ್ಕಾಗಿ ಸಿದ್ಧಳಾಗಿದ್ದಾಳೆ. ನಾವು ಅವಳನ್ನು ೧೦೦ ಯೋಜನೆಗಳ ದೂರದಲ್ಲಿದ್ದು ನಮ್ಮ ಮನೆಯಲ್ಲಿ ಮಾಡುವ ಸ್ನಾನ ಕಾಲದಲ್ಲಿ ನಾವು ನೆನಪಿಸಿದಾಗಲು ಅವಳು ಆ ಜಲದಲ್ಲಿ ಸನ್ನಿಹಿತಳಾಗುತ್ತಾಳೆ. ಆ ಜಲದಿಂದ ನಾವು ಸ್ನಾನ ಮಾಡಿದಾಗ ನಮ್ಮ ಪಾಪಗಳು ಕಳೆಯುತ್ತವೆ. ಇವೆಲ್ಲಾ ಕೇವಲ ಗಂಗೆಯ ನಾಮಸ್ಮರಣೆಯಿಂದಲೆ ನೆರವೇರುವ ಕಾಯಕ. ಇವಳು ದೇವತೆಗಳ ಲೋಕದಲ್ಲಿಯು ಹರಿದಿದ್ದಾಳೆ. ಅದಕ್ಕೆ ಇವಳಗೆ ದ್ಯುನದಿ ಎಂದು ಕರೆಯುತ್ತಾರೆ. ಎಂದೆಂದಿಗು ಬತ್ತದೆ ಇದ್ದ ನದಿ ಎಂದರೆ ಅದು ಗಂಗಾ ನದಿ. ಇವಳು ಹಿಮವಂತನ ಜೇಷ್ಠ ಪುತ್ರಿ ಆಗಿದ್ದಾಳೆ. ಭಗೀರಥನ ಪ್ರಯತ್ನದಿಂದ ಧರೆಗೆ ಬಂದವಳು. ನಂದಿನಿ, ನಲಿನಿ, ಸೀತಾ, ಮಾಲತಿ, ಮಲಾಪಹ ಎಂದು ಇವಳನ್ನು ಕರೆಯುವುದುಂಟು.

ಪರಶುರಾಮ ಜಯಂತಿ

ಪರಶುರಾಮ ಜಯಂತಿ

ವೈಶಾಖ ಶುಕ್ಲ ತೃತಿಯಾ
ಕೃತ್ತಿಕಾ ನಕ್ಷತ್ರ, ಸೌಭಾಗ್ಯ ಯೋಗ, ತೈತಿಲಕರಣ

ಪರಶುನಾಮಕನಾಗಿ ಪರಮಾತ್ಮನೆ ಅವತರಿಸಿದ ದಿನ. ಜಗತ್ತಿನಲ್ಲಿ ಯಾವ ಕರ್ತವ್ಯಚ್ಯತರಾದ ದುಷ್ಟ ಕ್ಷತ್ರಿಯರಿದ್ದರೋ, ಯಾರಿಂದ ಪ್ರಜೆಗಳಿಗೆ ತೊಂದರೋಯಾಗುತ್ತಿತ್ತೋ ಆಂತಹ ಪಾಪಿಷ್ಟ ರಾಜರನ್ನು ಸಂಹರಿಸಿ ಉಳಿದ ರಾಜರಿಗೆ ನೀತಿ ಭೋದನೆಯನ್ನು ಮಾಡುವುದಕ್ಕಾಗಿ ದೇವರು ಅವತರಿಸಿದ ದಿನ. "ಪರಶು" ಎಂದರೆ ಇದು ಸಂಸ್ಕೃದ ಶಬ್ದ. ಅದರ ಕನ್ನಡ ಅರ್ಥ "ಕೊಡ್ಡಲಿ"ಎಂದು ಅದನ್ನು ಹಿಡಿದುದದ್ದಕ್ಕೆ ಅವನನ್ನು ಪರಶು-ರಾಮ ಎಂದು ಕರೆಯಲ್ಪಟ್ಟಿತು. ಇವನು ಜಮದಗ್ನಿ ಋಷಿಗಳ ಹಾಗೂ ರೇಣುಕಾ ದೇವಿಯಲ್ಲಿ ಅವತರಿಸಿದ. ಇವನು ೨೧ ಸಲ ಭೂ ಪ್ರದಕ್ಷಿಣೆಯನ್ನು ಮಾಡಿದಾಗ ಸಂಹಾರ ಪೂರ್ಣಗೊಂಡಿತು. ಇವತ್ತಿನ ದಿನ ಅವನನ್ನು ದುಷ್ಚ ಭಂಜಕನೆಂದು ತಿಳಿದು ಚಿಂತಿಸಬೇಕು.

ಜಮದಗ್ನಿ ಸಂತೋವೀರ ಕ್ಷತ್ರಿಯಾಂತಕರ ಪ್ರಭೋ |
ಗ್ರಹಣಾರ್ಘ್ಯಂ ಮಯಾ ದತ್ತಂ ಕೃಪಯಾ ಪರಮೇಶ್ವರ ||

ಅರ್ಥ :- ಜಮದಗ್ನಿಯ ಮಗನೆ, ವೀರನೆ, ದುಷ್ಟ ಕ್ಷತ್ರಿಯರಿಗೆ ಯಮನಂತಿರುವವನೆ, ನಾನು ಕೊಂಡುವ ಅರ್ಘ್ಯವನ್ನು ಸ್ವೀಕರಿಸಿ ನನಗೆ ದುಷ್ಟರ ಭಾಧ ಇಲ್ಲದಂತೆ ಮಾಡು. ನನ್ನನ್ನು ಯಾವಾಗಲು ಅಂತಹ ದುಷ್ಟರಿಂದ ದೂರ ಇಡು. ದುಷ್ಟ ವಿಚಾರಗಳು, ದುಷ್ಟ ಆಚಾರಗಳು ನನ್ನಿಂದ ಆಗದೆ ಇದ್ದಂತೆ ನನ್ನನ್ನು ಕಾಪಾಡು ಎಂದು ಆತನನ್ನು ಪ್ರಾರ್ಥಿಸುವುದೇ ಈ ದಿನದ ವಿಶೇಷ. ಎಲ್ಲರು ಈ ಪ್ರಾರ್ಥನೆಯನ್ನು ಅವಶ್ಯವಾಗಿ ಮಾಡಬೇಕು. ಇವತ್ತಿನ ಜಗತ್ತಿನಲ್ಲಿ ಯಾರಿಗೆ "ದುಷ್ಟ" ಶಬ್ದದ ಪರಿಚಯವಿಲ್ಲ ಹೇಳಿ? ಇವತ್ತು ಶಬ್ದದ ಪರಿಚಯ ನಾಳೆ ದುಷ್ಟತನದ ಅನುಭವ. ಅದನ್ನು ದೂರದಲ್ಲಿ ಎಸೆಯುವುದಕ್ಕಾಗಿ ಈ ಪ್ರಾರ್ಥನೆ.

ಸೋಮವಾರ, ಏಪ್ರಿಲ್ 27, 2009

ಅಕ್ಷಯ ತೃತಿಯಾ ಮಹತ್ವ

ಅಕ್ಷಯ ತೃತಿಯಾ

ವೈಶಾಖ ಶುಕ್ಲ ತೃತಿಯಾ, ಕೃತಿಕಾ ನಕ್ಷತ್ರ, ಸೌಭಾಗ್ಯ ಯೋಗ ತೈತಿಲಕರಣ.

ಅಕ್ಷಯ ತೃತಿಯಾ ಇದು ಕೃತಯುಗದ ಮೊದಲನೆಯ ದಿನವೆಂದು ಪರಿಗಣಿಸಲಾಗುತ್ತದೆ. ಆ ದಿನದಲ್ಲಿ ಮಾಡಿದ ಎಲ್ಲ ಕರ್ಮಗಳು ಕೂಡ ಅಕ್ಷಯವಾಗುತ್ತದೆ ಎಂದು ಶಾಸ್ತ್ರ ಹೇಳಿದೆ. ಇದು ವರ್ಷಕ್ಕೆ ಒಂದು ಬಾರಿ ಬರುವ ದಿನ. ಇವತ್ತು ಅದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನ ಮಾಡಬೇಕು. ಏಕೆಂದರೆ ಆ ದಿನ ಮಾಡಿದ ಕೆಟ್ಟ ಕೆಸಲಗಳು ಅವು ವರ್ಷ ಪೂರ್ತಿ ಮುಂದು ವರೆಯುತ್ತವೆ. ವಿಶೇಷವಾಗಿ ಇವತ್ತು ಗಂಗಾಸ್ನಾನ, ತೀರ್ಥದರ್ಶನ, ಹೋಮ-ಹವನಗಳನ್ನು ಮಾಡುವುದಿದೆ. ಅಕ್ಕಿಯ ದಾನ ಕೂಡ ಮಾಡಬೇಕು.

"ಯಃ ಪಶ್ಯತಿ ತೃತಿಯಾಯಾಂ ಕೃಷ್ಣಂ ಚಂದನ ಭೂಷಿತಮ
ವೈಶಾಖಸ್ಯ ನೀತೇ ಪಕ್ಷೇಸಯಾತ್ಯಂಚ್ಯಚ್ಯುತ ಮಂದಿರಂ"

ಅರ್ಥ - ಶ್ರೀ ಕೃಷ್ಣನನ್ನು ಗಂಧದಿದಂದ ಪೂರ್ತಿಯಾಗಿ ಅಲಂಕಾರ ಮಾಡಿ ಆರಾಧಿಸಿದರೆ ವೈಕುಂಠ ಲೋಕ ಪ್ರಾಪ್ತಿಯಾಗುಗವುದು.

ಅಕ್ಷಯ ತೃತಿಯಾ ದಿನ ಅಲ್ಪ ಜಪ, ದಾನ, ಅಧ್ಯಯನ ಅಕ್ಷಯವಾಗಿ ಪರಿಣಮಿಸುವುದು. ಈ ದಿನಕ್ಕೆ ರೋಹಿಣಿ ನಕ್ಷತ್ರವು ಹಾಗೂ ಬುಧವಾರ ಮಹಾಪುಣ್ಯಕರವು. ಈ ದಿನವು ಮಹಾ ಪುಣ್ಯ ಮುಹೂರ್ತದಲ್ಲಿ ಒಂದಾಗಿದೆ. ಅವತ್ತು ಎಲ್ಲ ವಿಧವಾದ ಕಾರ್ಯಗಳನ್ನು ಆರಂಭಿಸಬಹುದು. ವಿಶೇಷವಾಗಿ ಜಲಕುಂಭ ದಾನವನ್ನು ಮಾಡಬೇಕು. (ಇದರ ಕಾರಣ ಮತ್ತು ಮಹತ್ವ ಅದಷ್ಚು ಬೇಗ ಪ್ರಕಟಿಸಲಾಗುತ್ತದೆ)

ವೈಶಾಖ ಮಾಸದ ಮಹತ್ವ

ವೈಶಾಖ ಮಾಸದ ಮಹತ್ವ

ಈ ಮಾಸದಲ್ಲಿ ಮುಂಜಾನೆ ಎದ್ದು ಮಾಡುವ ಸ್ನಾನಕ್ಕೆ ಬಹಳ ಮಹತ್ವ ಇದೆ ಅನ್ನುವುದನ್ನು ಈ ಶ್ಲೋಕ ಹೇಳುತ್ತದೆ - "ವೈಶಾಖ ಸ್ನಾನ ಮಾತ್ರೇಣ ನ ಪುನಃ ಚಾರ್ಯತೆ ಭುವಿ", ಅಂದರೆ ವೈಶಾಖ ಸ್ನಾನ ಮಾತ್ರದಿಂದ ಈ ಭೂಮಿ ಮೇಲೆ ಮತ್ತೆ ನಡೆಯುವುದಿಲ್ಲಾ. ಅದಕ್ಕಾಗಿ ವೈಶಾಖ ಸ್ನಾನವು ಮೋಕ್ಷಕ್ಕೆ ಅತ್ಯಾವಶ್ಯಕ.

ಈ ಮಾಸದ ದಾನಗಳು -

ಈ ಮಾಸದಲ್ಲಿ ವಿಶೇಷವಾಗಿ ತುಂಬಿದ ಕುಂಭವನ್ನು, ಪಾದರಕ್ಷೆ, ಛತ್ರಿ, ಬಂದ ಅತಿಥಿಗಳಿಗೆ ಉತ್ತಮವಾದ ಚಾಮರ, ತಣ್ಣೀರು, ಎಳೇ ನೀರು, ಪಾನಕ ಅನ್ನ ಇವೆ ಮೊದಲಾವುಗಳನ್ನು ದಾನ ಮಾಡಬೇಕು. ಮಂಚ, ಶಯ್ಯಾ, ಚಾಪೆ, ಕಂಬಳಿ ದಾನವು ಅಪಮೃತ್ಯು ಪರಿಹಾರ, ಅಂದರೆ ಅಕಾಲದಲ್ಲಿ ಆಗುವ ಮೃತ್ಯುವಿನ ಪರಿಹಾರವೆಂದು ಹೇಳಲಾಗಿದೆ. ಉತ್ತಮವಾದ ಶುದ್ಧ ಹತ್ತಿಯ ಬಟ್ಟೆಗಳನ್ನು ದಾನ ಮಾಡಬೇಕು. ಈ ಆಚರಣೆಯಲ್ಲಿ ಶ್ರದ್ಧೆ, ಭಕ್ತಿ ಮತ್ತು ಬುದ್ಧಿ ಇರಬೇಕಾದದ್ದು ಬಹಳ ಅವಶ್ಯಕ. ಈ ದಾನಗಳ ಹಿಂದೆ ಒಂದು ಇತಿಹಾಸವಿದೆ --

ಹಿಂದಕ್ಕೆ ಒಬ್ಬ ಶಂಖ ಬ್ರಾಹ್ಮಣ ಊರಿಂದ ಊರಿಗೆ ಹೋಗುವುದಕ್ಕಾಗಿ ಕಾಡಿನಲ್ಲಿ ಸಂಚಾರ ಮಾಡುತ್ತಿರುವಾಗ ಒಬ್ಬ ದುಷ್ಟನಾದ ವ್ಯಾಧ ಅವನನ್ನು ಹೆದರಿಸಿ. ಅವನಲ್ಲಿ ಇದ್ದ ಎಲ್ಲ ವಸ್ತುಗಳನ್ನು ಅಪಹಾರ ಮಾಡಿದನು. ಎಲ್ಲವನ್ನು ಅವನಿಂದ ಕಿತ್ತುಕೊಂಡು ನೀನಿನ್ನು ಹೊಗು ಎಂದು ಗಹರಿದನು. ಹೆದರಿದ ಬ್ರಾಹ್ಮಣ ಅಲ್ಲಿಂದ ಹೊರಟ. ಕಾಲಲ್ಲಿದ್ದ ಪಾದರಕ್ಷೆಳನ್ನು ಕೂಡ ಆ ವ್ಯಾಧ ಕಿತ್ತುಕೊಂಡಿದ್ದ. ಆ ಭಯಂಕರವಾದ ಬಿಸಿಲಿನಲ್ಲಿ ಬ್ರಾಹ್ಮಣ ಕಾಲು ಸುಡಿಸಿಕೊಳ್ಳುತ್ತಾ ಬದಳ ಕಷ್ಟದಿಂದ, ಬಹು ದೂರಕ್ಕೆ ಹೋಗುವುದನ್ನು ನೋಡಿ ಆ ವ್ಯಾಧನಿಗೆ ಕನಿಕರ ಬಂತು. ಅವನು ತನ್ನ ಹರಕು ಚಪ್ಪಲಿಯನ್ನು ಕೊಡಬೇಕೆಂದು ತೀರ್ಮಾನಿಸಿದನು. ಕೊಟ್ಟಿದ್ದು ಆಯಿತು. ತೆಗೆದುಕೊಂಡು ಆ ವ್ಯಕ್ತಿ ಈತನನ್ನು ತುಂಬ ಹೃದಯದಿಂದ ಆಶೀರ್ವದಿಸಿದನು. ನೀನು ವೈಶಾಖ ಮಾಸದಲ್ಲಿ ಪಾದರಕ್ಷೆ ದಾನ ಮಾಡಿದ ನಿನಗೆ ಒಳ್ಳೆಯದಾಗಲಿ ಅಂತ ಬ್ರಾಹ್ಮಣನೆಂದನು. ಇನ್ನು ಉಳಿದ ವೈಶಾಖದ ಮಹತ್ವವನ್ನು ಕೊಂಡಾಡಿದನು. ಆ ವಿಚಾರವನ್ನು ಕೇಳಿ ವ್ಯಾಧನು ಪೂರ್ಣ ಪರಿವರ್ತನೆಗೊಂಡು, ಶಂಖ ಎಂಬ ಆ ಬ್ರಾಹ್ಮಣನಿಂದ ಅಪಹರಿಸಿದ ಎಲ್ಲ ವಸ್ತುಗಳನ್ನು ಹಿಂದಿರುಗಿಸಿದನು.

ಅಷ್ಟು ಹೊತ್ತಿನವರೆಗೆ ಕಾದಾಡುತ್ತಿರುವ ಒಂದು ಸಿಂಹ ಮತ್ತು ಆನೆ ಸುಮ್ಮನೆ ನಿಂತುಕೊಂಡಿದ್ದವು. ಆಗ ಶಂಖನು ಕೇಳಿದನು "ನಿವು ಪರಮ ವೈರಿಗಳು. ಇಲ್ಲಿ ಜೊತೆಯಲಿ ನಿಂತಿದ್ದೀರಲ್ಲಾ, ಯಾರು ನೀವು?". ಅಲ್ಲಿ ಆ ಪ್ರಾಣಿಗಳು ತಮ್ಮ ಚರಿತ್ರವನ್ನು ಹೇಳತೊಡಗಿದವು. ನಾವು ಹಿಂದಿನ ಜನ್ಮದಲ್ಲಿ ಮತಂಗ ಋಷಿಯ ಮಕ್ಕಳು. ನಮ್ಮ ತಂದೆ ವೈಶಾಖ ಮಾಸ ಪ್ರಾಪ್ತವಾದಮೇಲೆ ನಮಗೆ ಮಾರ್ಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಬಿಸಿಲಿನಲ್ಲಿ ಬಂದವರಿಗೆ ಬೀಸಣಿಕೆಯಿಂದ ಬೀಸುವುದು, ಇವೇ ಮೊದಲಾದ ಆತಿಥ್ಯವನ್ನು ಮಾಡುವುದಕ್ಕೆ ಹೇಳಿದ್ದರು. ಆದರೆ ಉನ್ಮತ್ತರಾದ ನಾವು ಯಾವುದನ್ನೂ ಪಾಲಿಸಲಿಲ್ಲ. ಅದು ಅವರಿಗೆ ಬಹಳ ನೋವಾಯಿತು. ಅವರು ಅಲ್ಲೇ ನಮ್ಮನ್ನು ಶಪಿಸಿದರು. ನೀವಿಬ್ಬರು ಕ್ರೋಧ ಮತ್ತು ಮದ ಯೋನಿಯುಳ್ಳ ಪ್ರಾಣಗಳಾಗಿ ಹುಟ್ಟಿ ಎಂದು ಶಪಿಸಿದರು. ಆಗ ನಾನು 'ದಂತಿಲ' ಸಿಂಹನಾಗಿ, ಕೋಹಲನು ಆನೆಯಾಗಿ ಹುಟ್ಟಿದನು. ಬಹಳ ಪರಿಪರಿಯಾಗಿ ಅವರನ್ನು ಪ್ರಾರ್ಥಿಸಿದಾಗ ಅವರು ನಮಗೆ ಕೊಟ್ಟ ಶಾಪದಲ್ಲಿ ಈ ವಿಚಾರ ತಿಳಿಸಿದರು. ಶಂಖ ಎನ್ನುವ ಬ್ರಾಹ್ಮಣ ಒಬ್ಬ ದುಷ್ಠ ವ್ಯಾಧನಿಗೆ ವೈಶಾಖ ಮಾಸದ ಮಹತ್ವವನ್ನು ಹೇಳಬೇಕಾದಾಗ ನೀವಿಬ್ಬರು ಗಮನ ಕೊಟ್ಟು ಆಲಿಸಿರಿ. ಆಗ ನಿವು ಈ ಯೋನಿಯಿಂದ ಮುಕ್ತರಾಗಿ ಮತ್ತೆ ನನ್ನನ್ನೆ ಬಂದು ಸೇರುವಿರಿ ಎಂದರು. ಈಗ ನಾವಿಬ್ಬರೂ ನಿಮ್ಮ ಅನುಗ್ರಹದಿದಂದ ಮುಕ್ತರಾಗಿದ್ದೇವೆ. ನಾವು ಹೋಗಿ ಬರುತ್ತೇವೆ ಎಂದು ದಿವ್ಯವಾದ ದೇಹ, ಅದಕ್ಕೆ ಸುವಾಸನೆಯುತ ಗಂಧ ಲೇಪನ, ಇವೆಲ್ಲ ವೈಭವಗಳಿಂದ ಮುಕ್ತರಾಗಿ ಆ ದಂತಿಲ - ಕೋಹಲ, ಇಬ್ರು ಹೊರಟರು. ಈ ವಿಚಾರವನ್ನು ಶೃತದೇವನು, ಶೃತಕೀರ್ತಿ ಎಂಬ ರಾಜನಿಗೆ ಬೋಧಿಸಿದನು. ಇದು ಸ್ಕಂದ ಪುರಾಣದಲ್ಲಿ ಬಂದಿರುವ ವೈಶಾಖ ಮಾಸದ ಮಹತ್ವದ ವಿಚಾರವಾಗಿದೆ. ಆದ್ದರಿಂದ ಎಲ್ಲರು ಇದರ ಚಿಂತನೆಯನ್ನು ಅವಶ್ಯವಾಗಿ ಮಾಡಿ ಎಲ್ಲ ಪಾಪಗಳನ್ನು ಕಳೆದುಕೊಳ್ಳಬೇಕು.