ಪರಶುರಾಮ ಜಯಂತಿ
ವೈಶಾಖ ಶುಕ್ಲ ತೃತಿಯಾ
ಕೃತ್ತಿಕಾ ನಕ್ಷತ್ರ, ಸೌಭಾಗ್ಯ ಯೋಗ, ತೈತಿಲಕರಣ
ಪರಶುನಾಮಕನಾಗಿ ಪರಮಾತ್ಮನೆ ಅವತರಿಸಿದ ದಿನ. ಜಗತ್ತಿನಲ್ಲಿ ಯಾವ ಕರ್ತವ್ಯಚ್ಯತರಾದ ದುಷ್ಟ ಕ್ಷತ್ರಿಯರಿದ್ದರೋ, ಯಾರಿಂದ ಪ್ರಜೆಗಳಿಗೆ ತೊಂದರೋಯಾಗುತ್ತಿತ್ತೋ ಆಂತಹ ಪಾಪಿಷ್ಟ ರಾಜರನ್ನು ಸಂಹರಿಸಿ ಉಳಿದ ರಾಜರಿಗೆ ನೀತಿ ಭೋದನೆಯನ್ನು ಮಾಡುವುದಕ್ಕಾಗಿ ದೇವರು ಅವತರಿಸಿದ ದಿನ. "ಪರಶು" ಎಂದರೆ ಇದು ಸಂಸ್ಕೃದ ಶಬ್ದ. ಅದರ ಕನ್ನಡ ಅರ್ಥ "ಕೊಡ್ಡಲಿ"ಎಂದು ಅದನ್ನು ಹಿಡಿದುದದ್ದಕ್ಕೆ ಅವನನ್ನು ಪರಶು-ರಾಮ ಎಂದು ಕರೆಯಲ್ಪಟ್ಟಿತು. ಇವನು ಜಮದಗ್ನಿ ಋಷಿಗಳ ಹಾಗೂ ರೇಣುಕಾ ದೇವಿಯಲ್ಲಿ ಅವತರಿಸಿದ. ಇವನು ೨೧ ಸಲ ಭೂ ಪ್ರದಕ್ಷಿಣೆಯನ್ನು ಮಾಡಿದಾಗ ಸಂಹಾರ ಪೂರ್ಣಗೊಂಡಿತು. ಇವತ್ತಿನ ದಿನ ಅವನನ್ನು ದುಷ್ಚ ಭಂಜಕನೆಂದು ತಿಳಿದು ಚಿಂತಿಸಬೇಕು.
ಜಮದಗ್ನಿ ಸಂತೋವೀರ ಕ್ಷತ್ರಿಯಾಂತಕರ ಪ್ರಭೋ |
ಗ್ರಹಣಾರ್ಘ್ಯಂ ಮಯಾ ದತ್ತಂ ಕೃಪಯಾ ಪರಮೇಶ್ವರ ||
ಅರ್ಥ :- ಜಮದಗ್ನಿಯ ಮಗನೆ, ವೀರನೆ, ದುಷ್ಟ ಕ್ಷತ್ರಿಯರಿಗೆ ಯಮನಂತಿರುವವನೆ, ನಾನು ಕೊಂಡುವ ಅರ್ಘ್ಯವನ್ನು ಸ್ವೀಕರಿಸಿ ನನಗೆ ದುಷ್ಟರ ಭಾಧ ಇಲ್ಲದಂತೆ ಮಾಡು. ನನ್ನನ್ನು ಯಾವಾಗಲು ಅಂತಹ ದುಷ್ಟರಿಂದ ದೂರ ಇಡು. ದುಷ್ಟ ವಿಚಾರಗಳು, ದುಷ್ಟ ಆಚಾರಗಳು ನನ್ನಿಂದ ಆಗದೆ ಇದ್ದಂತೆ ನನ್ನನ್ನು ಕಾಪಾಡು ಎಂದು ಆತನನ್ನು ಪ್ರಾರ್ಥಿಸುವುದೇ ಈ ದಿನದ ವಿಶೇಷ. ಎಲ್ಲರು ಈ ಪ್ರಾರ್ಥನೆಯನ್ನು ಅವಶ್ಯವಾಗಿ ಮಾಡಬೇಕು. ಇವತ್ತಿನ ಜಗತ್ತಿನಲ್ಲಿ ಯಾರಿಗೆ "ದುಷ್ಟ" ಶಬ್ದದ ಪರಿಚಯವಿಲ್ಲ ಹೇಳಿ? ಇವತ್ತು ಶಬ್ದದ ಪರಿಚಯ ನಾಳೆ ದುಷ್ಟತನದ ಅನುಭವ. ಅದನ್ನು ದೂರದಲ್ಲಿ ಎಸೆಯುವುದಕ್ಕಾಗಿ ಈ ಪ್ರಾರ್ಥನೆ.
ತೃತಿಯಾ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ತೃತಿಯಾ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಭಾನುವಾರ, ಮೇ 31, 2009
ಸೋಮವಾರ, ಏಪ್ರಿಲ್ 27, 2009
ಅಕ್ಷಯ ತೃತಿಯಾ ಮಹತ್ವ
ಅಕ್ಷಯ ತೃತಿಯಾ
ವೈಶಾಖ ಶುಕ್ಲ ತೃತಿಯಾ, ಕೃತಿಕಾ ನಕ್ಷತ್ರ, ಸೌಭಾಗ್ಯ ಯೋಗ ತೈತಿಲಕರಣ.
ಅಕ್ಷಯ ತೃತಿಯಾ ಇದು ಕೃತಯುಗದ ಮೊದಲನೆಯ ದಿನವೆಂದು ಪರಿಗಣಿಸಲಾಗುತ್ತದೆ. ಆ ದಿನದಲ್ಲಿ ಮಾಡಿದ ಎಲ್ಲ ಕರ್ಮಗಳು ಕೂಡ ಅಕ್ಷಯವಾಗುತ್ತದೆ ಎಂದು ಶಾಸ್ತ್ರ ಹೇಳಿದೆ. ಇದು ವರ್ಷಕ್ಕೆ ಒಂದು ಬಾರಿ ಬರುವ ದಿನ. ಇವತ್ತು ಅದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನ ಮಾಡಬೇಕು. ಏಕೆಂದರೆ ಆ ದಿನ ಮಾಡಿದ ಕೆಟ್ಟ ಕೆಸಲಗಳು ಅವು ವರ್ಷ ಪೂರ್ತಿ ಮುಂದು ವರೆಯುತ್ತವೆ. ವಿಶೇಷವಾಗಿ ಇವತ್ತು ಗಂಗಾಸ್ನಾನ, ತೀರ್ಥದರ್ಶನ, ಹೋಮ-ಹವನಗಳನ್ನು ಮಾಡುವುದಿದೆ. ಅಕ್ಕಿಯ ದಾನ ಕೂಡ ಮಾಡಬೇಕು.
"ಯಃ ಪಶ್ಯತಿ ತೃತಿಯಾಯಾಂ ಕೃಷ್ಣಂ ಚಂದನ ಭೂಷಿತಮ
ವೈಶಾಖಸ್ಯ ನೀತೇ ಪಕ್ಷೇಸಯಾತ್ಯಂಚ್ಯಚ್ಯುತ ಮಂದಿರಂ"
ಅರ್ಥ - ಶ್ರೀ ಕೃಷ್ಣನನ್ನು ಗಂಧದಿದಂದ ಪೂರ್ತಿಯಾಗಿ ಅಲಂಕಾರ ಮಾಡಿ ಆರಾಧಿಸಿದರೆ ವೈಕುಂಠ ಲೋಕ ಪ್ರಾಪ್ತಿಯಾಗುಗವುದು.
ಅಕ್ಷಯ ತೃತಿಯಾ ದಿನ ಅಲ್ಪ ಜಪ, ದಾನ, ಅಧ್ಯಯನ ಅಕ್ಷಯವಾಗಿ ಪರಿಣಮಿಸುವುದು. ಈ ದಿನಕ್ಕೆ ರೋಹಿಣಿ ನಕ್ಷತ್ರವು ಹಾಗೂ ಬುಧವಾರ ಮಹಾಪುಣ್ಯಕರವು. ಈ ದಿನವು ಮಹಾ ಪುಣ್ಯ ಮುಹೂರ್ತದಲ್ಲಿ ಒಂದಾಗಿದೆ. ಅವತ್ತು ಎಲ್ಲ ವಿಧವಾದ ಕಾರ್ಯಗಳನ್ನು ಆರಂಭಿಸಬಹುದು. ವಿಶೇಷವಾಗಿ ಜಲಕುಂಭ ದಾನವನ್ನು ಮಾಡಬೇಕು. (ಇದರ ಕಾರಣ ಮತ್ತು ಮಹತ್ವ ಅದಷ್ಚು ಬೇಗ ಪ್ರಕಟಿಸಲಾಗುತ್ತದೆ)
ವೈಶಾಖ ಶುಕ್ಲ ತೃತಿಯಾ, ಕೃತಿಕಾ ನಕ್ಷತ್ರ, ಸೌಭಾಗ್ಯ ಯೋಗ ತೈತಿಲಕರಣ.
ಅಕ್ಷಯ ತೃತಿಯಾ ಇದು ಕೃತಯುಗದ ಮೊದಲನೆಯ ದಿನವೆಂದು ಪರಿಗಣಿಸಲಾಗುತ್ತದೆ. ಆ ದಿನದಲ್ಲಿ ಮಾಡಿದ ಎಲ್ಲ ಕರ್ಮಗಳು ಕೂಡ ಅಕ್ಷಯವಾಗುತ್ತದೆ ಎಂದು ಶಾಸ್ತ್ರ ಹೇಳಿದೆ. ಇದು ವರ್ಷಕ್ಕೆ ಒಂದು ಬಾರಿ ಬರುವ ದಿನ. ಇವತ್ತು ಅದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನ ಮಾಡಬೇಕು. ಏಕೆಂದರೆ ಆ ದಿನ ಮಾಡಿದ ಕೆಟ್ಟ ಕೆಸಲಗಳು ಅವು ವರ್ಷ ಪೂರ್ತಿ ಮುಂದು ವರೆಯುತ್ತವೆ. ವಿಶೇಷವಾಗಿ ಇವತ್ತು ಗಂಗಾಸ್ನಾನ, ತೀರ್ಥದರ್ಶನ, ಹೋಮ-ಹವನಗಳನ್ನು ಮಾಡುವುದಿದೆ. ಅಕ್ಕಿಯ ದಾನ ಕೂಡ ಮಾಡಬೇಕು.
"ಯಃ ಪಶ್ಯತಿ ತೃತಿಯಾಯಾಂ ಕೃಷ್ಣಂ ಚಂದನ ಭೂಷಿತಮ
ವೈಶಾಖಸ್ಯ ನೀತೇ ಪಕ್ಷೇಸಯಾತ್ಯಂಚ್ಯಚ್ಯುತ ಮಂದಿರಂ"
ಅರ್ಥ - ಶ್ರೀ ಕೃಷ್ಣನನ್ನು ಗಂಧದಿದಂದ ಪೂರ್ತಿಯಾಗಿ ಅಲಂಕಾರ ಮಾಡಿ ಆರಾಧಿಸಿದರೆ ವೈಕುಂಠ ಲೋಕ ಪ್ರಾಪ್ತಿಯಾಗುಗವುದು.
ಅಕ್ಷಯ ತೃತಿಯಾ ದಿನ ಅಲ್ಪ ಜಪ, ದಾನ, ಅಧ್ಯಯನ ಅಕ್ಷಯವಾಗಿ ಪರಿಣಮಿಸುವುದು. ಈ ದಿನಕ್ಕೆ ರೋಹಿಣಿ ನಕ್ಷತ್ರವು ಹಾಗೂ ಬುಧವಾರ ಮಹಾಪುಣ್ಯಕರವು. ಈ ದಿನವು ಮಹಾ ಪುಣ್ಯ ಮುಹೂರ್ತದಲ್ಲಿ ಒಂದಾಗಿದೆ. ಅವತ್ತು ಎಲ್ಲ ವಿಧವಾದ ಕಾರ್ಯಗಳನ್ನು ಆರಂಭಿಸಬಹುದು. ವಿಶೇಷವಾಗಿ ಜಲಕುಂಭ ದಾನವನ್ನು ಮಾಡಬೇಕು. (ಇದರ ಕಾರಣ ಮತ್ತು ಮಹತ್ವ ಅದಷ್ಚು ಬೇಗ ಪ್ರಕಟಿಸಲಾಗುತ್ತದೆ)
ಸೋಮವಾರ, ಮಾರ್ಚ್ 23, 2009
ಗೌರಿ ತೃತಿಯಾ ಮಹತ್ವ
ಗೌರಿ ತೃತಿಯಾ
ಚೈತ್ರ ಶುಕ್ಲ ತೃತಿಯಾದಿಂದ ವೈಶಾಖ ಶುಕ್ಲ ತೃತಿಯಾ ವರೆಗೆ , ಒಂದು ತಿಂಗಳ ಕಾಲ ಗೌರಿಯನ್ನು ಪೂಜಿಸಲಾಗುತ್ತದೆ. ಶಿವ - ಪಾರ್ವತಿಯರ ಪೂಜೆಯನ್ನು ಮಾಡಬೇಕು. ಸುವಾಸಿನಿ ಸ್ತ್ರೀಯರಿಗೆ ಉಡಿ ತುಂಬಬೇಕು. ಪಾನಕ ಮತ್ತು ಕೋಸಂಬರಿಗಳನ್ನು ಕೊಡಬೇಕು. ಈ ಒಂದು ತಿಂಗಳು ಸಮಯದಲ್ಲಿ ಸಾಮಾನ್ಯವಾಗಿ ಮಂಗಳವಾರದಂದು ಈ ಸಾಮೂಹಿಕ ಆಚರಣೆಯನ್ನು ಮಾಡಲಾಗುತ್ತದೆ.
(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)
ಚೈತ್ರ ಶುಕ್ಲ ತೃತಿಯಾದಿಂದ ವೈಶಾಖ ಶುಕ್ಲ ತೃತಿಯಾ ವರೆಗೆ , ಒಂದು ತಿಂಗಳ ಕಾಲ ಗೌರಿಯನ್ನು ಪೂಜಿಸಲಾಗುತ್ತದೆ. ಶಿವ - ಪಾರ್ವತಿಯರ ಪೂಜೆಯನ್ನು ಮಾಡಬೇಕು. ಸುವಾಸಿನಿ ಸ್ತ್ರೀಯರಿಗೆ ಉಡಿ ತುಂಬಬೇಕು. ಪಾನಕ ಮತ್ತು ಕೋಸಂಬರಿಗಳನ್ನು ಕೊಡಬೇಕು. ಈ ಒಂದು ತಿಂಗಳು ಸಮಯದಲ್ಲಿ ಸಾಮಾನ್ಯವಾಗಿ ಮಂಗಳವಾರದಂದು ಈ ಸಾಮೂಹಿಕ ಆಚರಣೆಯನ್ನು ಮಾಡಲಾಗುತ್ತದೆ.
(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)